Advertisement

ಗೋ ಅಧಿಸೂಚನೆ ಚರ್ಚೆಗೆ ಕೇರಳ ವಿಶೇಷ ಅಧಿವೇಶನ

03:45 AM Jun 03, 2017 | Team Udayavani |

ತಿರುವನಂತಪುರ:  “ವಧೆಗಾಗಿ ಜಾನುವಾರುಗಳ ಮಾರಾಟ ಮತ್ತು ಖರೀದಿ’ ನಿಷೇಧಿಸಿ ಕೇಂದ್ರ ಹೊರಡಿಸಿರುವ ಅಧಿ ಸೂಚನೆ ಕುರಿತು ಚರ್ಚಿಸುವ ಉದ್ದೇಶದಿಂದ 8ರಂದು ಕೇರಳ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ.

Advertisement

“ಅಧಿಸೂಚನೆ ಕುರಿತಂತೆ ಯಾವ ನಿಲುವು ತಳೆಯಬೇಕು ಎಂಬ ಬಗ್ಗೆ ಚರ್ಚಿಸಿ, ಸದಸ್ಯರ ಅಭಿಪಾ Åಯ, ಸಲಹೆ, ಸೂಚನೆ ಮೇರೆಗೆ ಅಂತಿಮ ನಿರ್ಧಾರಕ್ಕೆ ಬರುವ ಉದ್ದೇಶದಿಂದ ಅಧಿವೇಶನ ಕರೆಯಲಾಗಿದೆ ಎಂದು ಅರಣ್ಯ ಮತ್ತು ಪಶುಸಂಗೋಪನೆ ಸಚಿವ ಕೆ.ರಾಜು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಎಚ್ಚರಿಕೆ: ಬೀಫ್ ಫೆಸ್ಟ್‌ ಆಯೋಜಿಸಿದ್ದ ಮದ್ರಾಸ್‌ ಐಐಟಿ ವಿದ್ಯಾರ್ಥಿ ಸೂರಜ್‌ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ತೀವ್ರ ಗೊಳಿಸುವುದಾಗಿ ಸೂರಜ್‌ನ ಸಹಪಾಠಿಗಳು ಎಚ್ಚರಿಸಿದ್ದಾರೆ. ಬೀಫ್ ಫೆಸ್ಟಿವಲ್‌ ವೇಳೆ ಸೂರಜ್‌ ಗೋಮಾಂಸ ಸೇವಿಯೇ ಇರಲಿಲ್ಲ. ಆದರೂ ಆತನ ಮೇಲೆ ಅನಾವಶ್ಯಕವಾಗಿ ಹಲ್ಲೆ ನಡೆಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅತ್ತ ಹಲ್ಲೆಗೊಳಗಾಗಿರುವ ಸೂರಜ್‌ನ ಬಲಭಾಗದ ಕಣ್ಣನ್ನು ಉಳಿಸಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next