Advertisement

ರುದ್ರಭೂಮಿಗೆ ವಿಶೇಷ ಒತ್ತು

06:41 AM Feb 19, 2019 | |

ಬೆಂಗಳೂರು: ನಗರದ ಸ್ಮಶಾನಗಳ ಅಭಿವೃದ್ಧಿಗೆ ಬಿಬಿಎಂಪಿ ವಿಶೇಷ ಒತ್ತು ನೀಡಿದ್ದು, ಈ ಬಾರಿ  50 ಕೋಟಿ ರೂ.ಗಿಂತಲೂ ಅಧಿಕ ಹಣ ಮೀಸಲಿಟ್ಟಿದೆ. ಪಾಲಿಕೆ ವ್ಯಾಪ್ತಿಯ ನಾಲ್ಕೂ ದಿಕ್ಕುಗಳಲ್ಲಿ ರುದ್ರಭೂಮಿ ಅಥವಾ ಸ್ಮಶಾನಗಳ ನಿರ್ಮಾಣಕ್ಕಾಗಿ 40 ಕೋಟಿ ರೂ. ನೀಡಲಾಗಿದೆ.

Advertisement

ಅಲ್ಲದೆ, ಈಗಾಗಲೇ ಇರುವ ರುದ್ರಭೂಮಿಗಳ ನಿರ್ವಹಣೆಗೆ 12 ಕೋಟಿ ರೂ., ಸ್ಮಶಾನಗಳಲ್ಲಿ ತೋಟಗಳ ನಿರ್ವಹಣೆಗೆ 3 ಕೋಟಿ ರೂ. ನೀಡಲಾಗಿದೆ. ಇಷ್ಟೇ ಅಲ್ಲ, ಸ್ಮಶಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ-ಪಂಗಡದ ಸಿಬ್ಬಂದಿಗೆ ವೈಯಕ್ತಿಕ ಮನೆ ನಿರ್ಮಿಸಿಕೊಡಲು ಉದ್ದೇಶಿಸಿದೆ. ಇದಕ್ಕಾಗಿ ಒಂದು ಕೋಟಿ ರೂ. ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next