Advertisement

ಅಂಗವಿಕಲರಿಗೆ ವಿಶೇಷ ದ್ವಿಚಕ್ರ ವಾಹನ ವಿತರಣೆ

01:00 AM Mar 08, 2019 | Harsha Rao |

ಬದಿಯಡ್ಕ: ಅಂಗವಿಕಲರು ಎಲ್ಲರಂತೆ ಜೀವನದ ಪಯಣ ಮುನ್ನಡೆಸ ಬೇಕು ಎಂಬ ಉದ್ದೇಶವನ್ನಿರಿಸಿ ಅವರಿಗಾಗಿ ವಿಶೇಷ ವಾಹನಗಳನ್ನು ನೀಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಹೇಳಿದರು.

Advertisement

ಬದಿಯಡ್ಕ ಗ್ರಾಮ ಪಂಚಾಯತ್‌ ವತಿಯಿಂದ 2018-19ನೇ ಸಾಲಿನ ಅರ್ಹ ಫಲಾನುಭವಿಗಳಾದ 7 ಮಂದಿ ಅಂಗವಿಕಲ‌ರಿಗೆ ವಿಶೇಷ ದ್ವಿಚಕ್ರ ವಾಹನವನ್ನು ವಿತರಿಸಿ ಅವರು ಮಾತನಾಡಿ ದರು. ಸಾಮಾನ್ಯ ನಾಗರಿಕರಂತೆ ಅವರೂ ಬದುಕುವುದರೊಂದಿಗೆ ತಮ್ಮ ಕುಟುಂಬ ವನ್ನು ಮುನ್ನಡೆಸಲು ಈ ವಾಹನವು ಸಹಕಾರಿ ಯಾಗಲಿ ಎಂದು ಅವರು ಹಾರೈಸಿದರು.

ಗ್ರಾ.ಪಂ. ಉಪಾಧ್ಯಕ್ಷೆ ಸೆ„ಬುನ್ನೀಸಾ ಅಧ್ಯಕ್ಷತೆಯನ್ನು ವಹಿಸಿದ್ದರು. 

ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನ್ವರ್‌ ಓಝೋನ್‌, ಶ್ಯಾಮಪ್ರಸಾದ ಮಾನ್ಯ, ಗ್ರಾಮ ಪಂಚಾಯತ್‌ ಸದಸ್ಯರಾದ ವಿಶ್ವನಾಥ ಪ್ರಭು ಕರಿಂಬಿಲ, ಬಾಲಕೃಷ್ಣ ಶೆಟ್ಟಿ ಕಡಾರು, ಮುನೀರ್‌ ಉಪಸ್ಥಿತರಿದ್ದು ಮಾತನಾಡಿದರು. ಒಟ್ಟು ಏಳುಮಂದಿ ಫಲಾನುಭವಿಗಳಿಗೆ ಹೀರೋ ಕಂಪೆನಿಯ ಸ್ಕೂಟರನ್ನು ವಿತರಿಸಲಾಯಿತು. 

ಆಯ್ಕೆ ಸಮಿತಿಯ ಐಸಿಡಿಎಸ್‌ನ ಜ್ಯೋತಿ ಸ್ವಾಗತಿಸಿ, ಭವ್ಯಾ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next