Advertisement

Special Article ನಾಡು ಕಂಡ ಅಪರೂಪದ ರಾಜಕಾರಣಿ ಆರ್‌.ಬಿ.ತಿಮ್ಮಾಪುರ

11:30 PM Nov 01, 2023 | Team Udayavani |

ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಣ್ಣ ಬಾಲಪ್ಪ ತಿಮ್ಮಾಪೂರ ನಾಡು ಕಂಡ ಅಪರೂಪದ ರಾಜಕಾರಣಿ. ಉತ್ತರ ಕರ್ನಾಟಕದ ನಾಯಕರಾಗಿ ಗುರುತಿಸಿಕೊಂಡಿರುವ ಇವರು ಸಾಮಾಜಿಕ, ಧಾರ್ಮಿಕ, ರಾಜಕೀಯವಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ.

Advertisement

1962 ಸೆ.16 ರಂದು ಜನಿಸಿದರು. ತಂದೆ ಬಾಲಪ್ಪ, ತಾಯಿ ಶ್ರೀಮತಿ ಸತ್ಯವ್ವ. ಕೃಷಿ ಕೂಲಿ ಕಾರ್ಮಿಕರಾಗಿದ್ದ ಇವರು ಬಡತನವನ್ನೇ ಹಾಸಿ ಹೊದ್ದರೂ ಮಕ್ಕಳ ವಿದ್ಯಾಭ್ಯಾಸ ಮೊಟಕುಗೊಳಿಸದೆ ಸಾಕಷ್ಟು ತೊಂದರೆಗಳ ನಡುವೆಯೂ ಅವರನ್ನು ಓದಿಸಿ ಬೆಳೆಸಿದರು.

ಮನೆಯ ಹಿರಿಯ ಮಗನಾದ ರಾಮಣ್ಣನವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮ ಉತ್ತೂರದಲ್ಲಿ ಮುಗಿಸಿ ಪ್ರೌಢಶಾಲೆಯನ್ನು ಗೋಕಾಕ ತಾಲೂಕಿನ ಯಾದವಾಡದಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಕುಸ್ತಿ-ಕಬಡ್ಡಿ ಕ್ರೀಡೆಗಳಲ್ಲಿ ಅತಿ ಆಸಕ್ತಿ ಹೊಂದಿರುವ ಅವರು, ಉತ್ತಮ ಕ್ರೀಡಾಪಟುವಾಗಿ ಬೆಳೆದರು. ಪದವಿ ಶಿಕ್ಷಣ ಪಡೆದ ನಂತರ ಧಾರವಾಡದಲ್ಲಿ ಎಲ್‌ಎಲ್‌ಬಿ ಪೂರ್ಣ ಗೊಳಿಸಿದರು. ಆ ಸಮಯದಲ್ಲಿ ಕಬಡ್ಡಿಯಲ್ಲಿ ಯೂನಿವರ್ಸಿಟಿ ಬ್ಲೂ ಆಗಿ ಹೆಸರು ಗಳಿಸಿದರು.

ಮಾಜಿ ಸಂಸದರು, ಅಣ್ಣಾವ್ರು ಎಂದೇ ಖ್ಯಾತರಾಗಿದ್ದ ದಿ.ಎಸ್‌.ಟಿ. ಪಾಟೀಲರು ಮುಧೋಳ ಮೀಸಲು ಮತಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪ ರ್ಧಿಸಲು ಉತ್ತಮ ವ್ಯಕ್ತಿಯನ್ನು ಹುಡುಕುತ್ತಿರುವಾಗ ಅವರ ಕಣ್ಣಿಗೆ ಬಿದ್ದವರೆ ಆರ್‌.ಬಿ.ತಿಮ್ಮಾಪೂರ. ಸರಳ, ಸಜ್ಜನ ವ್ಯಕ್ತಿತ್ವದ, ಜನಪರ ಕಾಳಜಿಯುಳ್ಳ, ವಿದ್ಯಾವಂತರಾದ ತಿಮ್ಮಾಪೂರರನ್ನು ಕಂಡು ಇವರೇ ಸೂಕ್ತ ಅಭ್ಯರ್ಥಿ ಎಂದು ನಿರ್ಧರಿಸಿದರು. ಅಂದಿನಿಂದ ತಿಮ್ಮಾಪೂರ ಅವರ ರಾಜಕೀಯ ಯಾತ್ರೆ ಶುರುವಾಯಿತು.

1989ರ ವಿಧಾನಸಭೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ 27ನೇ ವಯಸ್ಸಿನಲ್ಲಿಯೇ ಆಯ್ಕೆಯಾಗಿ ಕರ್ನಾಟಕ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡು ನೇಕಾರ ಸಮುದಾಯಕ್ಕೆ ಅನೇಕ ಯೋಜನೆಗಳನ್ನು ಕಲ್ಪಿಸಿದರು. ನೇಕಾರರಿಗೆ ಸೌಲಭ್ಯಗಳನ್ನು ನೀಡುವ ಗುರುತರ ಜವಾಬ್ದಾರಿಯನ್ನು ಹೊಣೆಗಾರಿಕೆಯಿಂದ ನಿಭಾಯಿಸಿದರು.

Advertisement

1994ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಸೋಲುಂಡರು. ಆದರೂ ಧೃತಿಗೆಡದೆ ನಿರಂತರವಾಗಿ ಜನರ ಮಧ್ಯದಲ್ಲಿದ್ದುಕೊಂಡು ಕಾಂಗ್ರೆಸ್‌ ಪಕ್ಷ ಸಂಘಟಿಸುತ್ತ, ಜನರ ಕುಂದು ಕೊರತೆಗಳನ್ನು ಅಧಿ ಕಾರಿಗಳ ಮುಂದೆ ತಂದು ಅವುಗಳಿಗೆ ಪರಿಹಾರ ಒದಗಿಸುತ್ತ ಮುನ್ನಡೆದರು.

ತಾಲೂಕಿನ ಪ್ರತಿ ಗ್ರಾಮದಲ್ಲೂ ಕಾಂಗ್ರೆಸ್‌ ಪಕ್ಷದ ಸಂಘಟನೆಗೆ ಒತ್ತು ನೀಡಿ ಹಗಲಿರುಳು ದುಡಿದರು. 1999ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಪಡೆದರು. ಆ ಮೂಲಕ ಎರಡನೇ ಬಾರಿ ವಿಧಾನಸಭೆ ಪ್ರವೇಶಿಸಿದ ತಿಮ್ಮಾಪೂರ ಅವರು ಎಸ್‌.ಎಂ.ಕೃಷ್ಣ ಮಂತ್ರಿಮಂಡಲದಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿ, ಯೋಜನೆ, ಸಾಂಖೀÂಕ ಇಲಾಖೆ ಸಂಪುಟ ದರ್ಜೆಯ ಸಚಿವರಾಗಿ ಬಡ್ತಿ ಹೊಂದಿ 2004 ರವರೆಗೆ ಕಾರ್ಯ ನಿರ್ವಹಿಸಿದರು. ಮುಧೋಳ ಇತಿಹಾಸದಲ್ಲಿಯೇ ಮತಕ್ಷೇತ್ರದ ಅಭ್ಯರ್ಥಿಯೊಬ್ಬರು ಮೊದಲ ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ತಿಮ್ಮಾಪೂರ ಅವರಿಗೆ ಸಲ್ಲುತ್ತದೆ.

ತಮ್ಮ ಅಧಿಕಾರ ಅವ ಧಿಯಲ್ಲಿ ಮಹಾಲಿಂಗಪೂರ ಕೆರೆ ಅಭಿವೃದ್ಧಿ, ಮುಧೋಳ ನಗರಕ್ಕೆ ಶಾಶ್ವತ ನೀರಿನ ಯೋಜನೆಗೆ 15 ಕೋಟಿ ರೂ.ಗಳನ್ನು ತರಿಸಿ ಅಭಿವೃದ್ಧಿಗೆ ನಾಂದಿ ಹಾಡಿದರು. ಮುಧೋಳ ನಗರದಲ್ಲಿ ರನ್ನನ ಹೆಸರು ಅಜರಾಮರಗೊಳಿಸುವ ನಿಟ್ಟಿನಲ್ಲಿ ಮೊದಲು ಚಾಲನೆ ನೀಡಿದವರೇ ತಿಮ್ಮಾಪೂರ ಅವರು.

ಮುಧೋಳ ನಗರದಲ್ಲಿನ ಲೋಕಾಪೂರ ರಸ್ತೆಯಲ್ಲಿ ರನ್ನ ಭವನ ನಿರ್ಮಿಸಿ ಧರ್ಮಸ್ಥಳ ಧರ್ಮಾ ಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆಗೊಳಿಸಿದರು. ಆ ಮೂಲಕ ಪಟ್ಟಣದಲ್ಲಿ ನಡೆಯುವ ಕನ್ನಡ ಸಾಹಿತ್ಯ, ಸಂಗೀತ, ಸಂಸ್ಕೃತಿ, ಚಿಂತನ ಮಂಥನಗಳಿಗೆ ವೇದಿಕೆ ಒದಗಿಸಿದರು. ಗ್ರಾಮೀಣ ಭಾಗಗಳಲ್ಲಿನ ವಿದ್ಯುತ್‌ ಸಮಸ್ಯೆಯನ್ನು ಅರಿತು ವಿದ್ಯುತ್‌ ಜಾಲ ವಿಸ್ತರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಹಲವಾರು ಯೋಜನೆಗಳನ್ನು ತಾಲೂಕಿಗೆ ತಂದರು.

ಮಂಟೂರ, ಶಿರೋಳ, ಬೆಳಗಲಿ, ಹಲಗಲಿ ಮುಂತಾದ ಗ್ರಾಮಗಳಲ್ಲಿ 33 ಕೆವಿ ವಿದ್ಯುತ್‌ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದರು. ರೈತರ ಜಮೀನುಗಳಿಗೆ ಸಮರ್ಪಕ ನೀರಾವರಿ ಕಲ್ಪಿಸಿ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕರಿಸಿದರು. ಮುಂದೆ ತಾಲೂಕು ಸಮಗ್ರವಾಗಿ ನೀರಾವರಿಗೊಳಪಡಲು ಇದು ಪ್ರಥಮ ಹೆಜ್ಜೆಯಾಯಿತು.

ತಾಲೂಕಿನಲ್ಲಿ ಢವಳೇಶ್ವರ, ಉತ್ತೂರ, ಜಾಲಿಬೇರ, ಮುಧೋಳ, ಜೀರಗಾಳ, ಇಂಗಳಗಿ, ಜಂಬಗಿ, ಆಲಗುಂಡಿ ಒಟ್ಟು 8 ಗ್ರಾಮಗಳಲ್ಲಿ ಬ್ಯಾರೇಜ್‌ಗಳನ್ನು ನಿರ್ಮಿಸಿದರು. ವಿದ್ಯುತ್‌ ಹಾಗೂ ಬ್ಯಾರೇಜ್‌ಗಳ ನಿರ್ಮಾಣದಿಂದ ಮುಧೋಳ ತಾಲೂಕಿನ ರೈತರು ವಾಣಿಜ್ಯ ಬೆಳೆ ಬೆಳೆದು ಆರ್ಥಿಕವಾಗಿ ಸ್ಥಿತಿವಂತರಾಗಲೆಂಬ ದೂರದೃಷ್ಟಿ ಫಲ ನೀಡಿದೆ. ಅಲ್ಲದೆ ಹಿಂದುಳಿದ, ದಲಿತ ವರ್ಗಗಳಿಗೆ ಅನುಕೂಲವಾಗುವಂತಹ ನೂರಾರು ಯೋಜನೆಗಳನ್ನು ಕಾರ್ಯಗತ ಮಾಡಿದರು. ಮುಧೋಳ ತಾಲೂಕಿನಲ್ಲಿ ಎಸ್‌ಸಿ, ಎಸ್‌ಟಿ ಜನರಿಗೆ ಜಮೀನನ್ನು ಮಂಜೂರು ಮಾಡಿಸಿಕೊಟ್ಟರು. ಆಶ್ರಯ, ಅಂಬೇಡ್ಕರ್‌ ಹಾಗೂ ಇಂದಿರಾ ಅವಾಸ ಯೋಜನೆಗಳಲ್ಲಿ ಸಾವಿರಾರು ಮನೆಗಳನ್ನು ಹಂಚಿಕೆ ಮಾಡಿ ನಿರಾಶ್ರಿತರಿಗೆ ನೆರಳಾದರು. ಕಲಾವಿದರಿಗೆ ಮಾಸಾಶನ, ಆಸ್ಪತ್ರೆ ವೆಚ್ಚ ಸೇರಿದಂತೆ ಸಾಕಷ್ಟು ನೆರವು ಒದಗಿಸಿದರು. ಶೈಕ್ಷಣಿಕ ವಲಯದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಶ್ರಮ ವಹಿಸಿದರು. ಲೋಕಾಪೂರದಲ್ಲಿ ಎಪಿಎಂಸಿ ಕಟ್ಟಡ ನಿರ್ಮಿಸಿದರು. ನಗರದಲ್ಲಿ ಬಸ್‌ ಡಿಪೋ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದರು. ಮುಧೋಳ ಬಸ್‌ ನಿಲ್ದಾಣಕ್ಕೆ ಕಾಯಕಲ್ಪ ನೀಡಿದರು.

ಮುಧೋಳದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ, ಹೆಬ್ಟಾಳದಲ್ಲಿ ನವೋದಯ ವಸತಿ ಶಾಲೆ ನಿರ್ಮಾಣ, ಪ್ರಥಮ ದರ್ಜೆ ಕಾಲೇಜಿಗೆ ಅಡಿಗಲ್ಲು, ರನ್ನ ಕ್ರೀಡಾಂಗಣ ಸೇರಿದಂತೆ ಹಲವಾರು ಜನಪರ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಉತ್ತರ ಕರ್ನಾಟಕದ ಜನಪರ ನಾಯಕ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಹಾಗೂ ಇತರೆ ಎಲ್ಲ ವರ್ಗದ ಜನರ ಪರವಾಗಿರುವ ಜನಪ್ರಿಯ ನಾಯಕ ಆರ್‌.ಬಿ. ತಿಮ್ಮಾಪೂರ ಅವರು ಕಾಂಗ್ರೆಸ್‌ ಪಕ್ಷ ವಹಿಸಿದ ಜವಾಬ್ದಾರಿಯನ್ನು ವಹಿಸಿಕೊಂಡು ಸಾಕಷ್ಟು ಮೆಚ್ಚುಗೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮೂಲಕ ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರ ನೆಲೆ ಕಲ್ಪಿಸುವಲ್ಲಿ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next