Advertisement

“ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ರೆ ಕೊಂದುಹಾಕ್ತೇವೆ ಅಂತಾರೆ’

11:38 AM Jun 25, 2017 | |

ಮೈಸೂರು: ಹಿಂದೂ ಧರ್ಮದಷ್ಟು ಭಯಂಕರವಾದ ಧರ್ಮ ಈ ಪ್ರಪಂಚದಲ್ಲಿ ಮತ್ತೂಂದಿಲ್ಲ. ಇದನ್ನು ಹೇಳಿದರೆ ತನ್ನನ್ನು ಕೊಂದು ಹಾಕುತ್ತೇವೆ ಎನ್ನುತ್ತಾರೆ ವಿನಾ ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಎಂದು ವಿಚಾರವಾದಿ ಪೊ›.ಕೆ.ಎಸ್‌.ಭಗವಾನ್‌ ಅಸಮಾಧಾನ ವ್ಯಕ್ತಪಡಿಸಿದರು. 

Advertisement

ಚಾರ್ವಾಕ ಸೋಷಿಯಲ್‌ ಆ್ಯಂಡ್‌ ಕಲ್ಚರಲ್‌ ಟ್ರಸ್ಟ್‌ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ದೇವರು-ಧರ್ಮ-ರಾಜಕಾರಣ ಕುರಿತು ಅವರು ಮಾತನಾಡಿದರು. ಹಳೆಯ ಯಾವುದೇ ದೇವಸ್ಥಾನಗಳಲ್ಲಿ ಬೆಳಕಿಲ್ಲ. ಅದೇ ರೀತಿ ಸಮಾಜವನ್ನೂ ಕಗತ್ತಲಲ್ಲಿಟ್ಟಿದ್ದಾರೆ. ಜನ ಬುದ್ಧಿವಂತರಾದರೆ ಪ್ರಶ್ನೆ ಮಾಡುತ್ತಾರೆ. ಒತ್ತಾಯ ಮಾಡಿ ಪ್ರತಿಭಟನೆ ಮಾಡುತ್ತಾರೆ ಎಂಬ ಕಾರಣಕ್ಕೆ ಎಲ್ಲ ಕಾಲದಲ್ಲಿಯೂ ಜನರನ್ನು ಕತ್ತಲಲ್ಲಿಡುತ್ತಾ ಬಂದಿದ್ದಾರೆ.

ಯಾವುದೋ ಶಕ್ತಿ ತನ್ನನ್ನು ಕಾಪಾಡುತ್ತಿದೆ ಎಂಬ ಭಯದಿಂದ ಮನುಷ್ಯ ದೇವರನ್ನು ಸೃಷ್ಟಿ ಮಾಡಿಕೊಂಡ, ಒಂದೊಂದು ಬುಡಕಟ್ಟು ಕೂಡ ಒಂದೊಂದು ದೇವರನ್ನು ಸೃಷ್ಟಿ ಮಾಡಿಕೊಂಡಿತು. ಆ ನಂತರದಲ್ಲಿ ಧರ್ಮ ಹುಟ್ಟಿಕೊಂಡಿತು. ನಂತರದಲ್ಲಿ ಪುರೋಹಿತಶಾಹಿಗಳು ದುಡಿಯುವ ವರ್ಗವನ್ನು ಸೃಷ್ಟಿಸಿದರು ಎಂದು ಅವರು ಪ್ರತಿಪಾದಿಸಿದರು.

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವಿಂಗಡಿಸಿ ಕಂದಾಚಾರದ ಮೂಲಕ ಎಲ್ಲರನ್ನೂ ಹಿಡಿದಿಡುವ ಕೆಲಸವನ್ನು ಪುರೋಹಿತಶಾಹಿ ಮಾಡಿದೆ. ಕ್ರಿ.ಪೂ.6ನೇ ಶತಮಾನದಲ್ಲಿ ಬುದ್ಧ, ಮಹಾವೀರರು ಇಂತಹ ಕಂದಾಚಾರಗಳನ್ನು ಪ್ರಶ್ನೆ ಮಾಡಲು ಶುರು ಮಾಡಿದರು ಎಂದು ಹೇಳಿದರು. ದೇಶದ ಮೇಲೆ ಮುಸ್ಲಿಮರು ಆಕ್ರಮಣ ಮಾಡಲೂ ಈ ವೈದಿಕ ಧರ್ಮದವರೇ ಕಾರಣ ಎಂದ ಅವರು, ಧರ್ಮ ಇದ್ದ ಕಡೆ ರಾಜಕಾರಣ ಇರಲ್ಲ.

ಜಾತಿ ಇದ್ದ ಕಡೆ ಮಾತ್ರ ರಾಜಕಾರಣ ಇರುತ್ತೆ ಎಂದರು. ಮತ ಧರ್ಮ ಎಂದು ಪ್ರತಿಪಾದಿಸುವವರಿಗೆ ಎರಡೂ ಶಬ್ದದ ನಿಜವಾದ ಅರ್ಥಗೊತ್ತಿಲ್ಲ. ಮತವೇ ಬೇರೆ, ಧರ್ಮವೇ ಬೇರೆ. ವೈಚಾರಿಕ ವಿಚಾರಗಳಿಲ್ಲದೆ ಹುಟ್ಟಿಕೊಂಡಿದ್ದೇ ಮತ, ಮನುಷ್ಯ ತನ್ನ ಮಾನಸಿಕ ಶಕ್ತಿಯನ್ನು ಬಳಸಿಕೊಳ್ಳದಿದ್ದರೆ ಬೆಳವಣಿಗೆಯಾಗಲ್ಲ ಎಂದರು.

Advertisement

ಸಮುದ್ರಕ್ಕೆ ಎಲ್ಲಾ ನದಿಗಳು ಸೇರಿದರೂ ಇದು ಇಂತಹ ನದಿಯ ನೀರು ಎಂದು ಗುರುತಿಸಲಾಗುವುದಿಲ್ಲ. ಅದೇ ರೀತಿ ಸಮುದ್ರಗಳು ಸೇರಿಕೊಂಡಂತೆ ಮನುಷ್ಯ ಜನಾಂಗ ಸೇರಿದೆ. ಆದರೆ, ನಾವು ಹಿಂದೂ, ಮುಸ್ಲಿಂ, ಕ್ರೆ„ಸ್ತ ಎಂದು ಒಡೆದು ಹಾಕಿದ್ದೇವೆ. ಸಮುದ್ರದ ಉದಾಹರಣೆಕೊಟ್ಟು ಮಾನವ ಜನಾಂಗ ಒಂದು ಎಂದು ಹೇಳಿದ ಬುದ್ಧನನ್ನು ರಾಮಯಾಣದಲ್ಲಿ ರಾಮನ ಬಾಯಲ್ಲಿ ನಿಂದಿಸಲಾಗಿದೆ ಎಂದು ಹೇಳಿದರು.

ವೇದ, ಉಪನಿಷತ್‌, ಸಂಸ್ಕೃತ ಗ್ರಂಥಗಳಲ್ಲೆಲ್ಲೂ ಹಿಂದೂ ಎಂಬ ಪದ ಉಲ್ಲೇಖವಿಲ್ಲ. ಆದರೆ, ಅನಾದಿ ಕಾಲದಲ್ಲಿ ಹೀನರನ್ನು ಹಿಂದೂ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಗೌರವ ಇದ್ದವರ್ಯಾರೂ ನಾನು ಹಿಂದೂ ಎಂದು ಹೇಳಿಕೊಳ್ಳಬಾರದು ಎಂದರು. ಬಸವಣ್ಣ ದಯೆಯೇ ಧರ್ಮದ ಮೂಲ ಎಂದಿದ್ದಾರೆ. ಆದರೆ, ಇಂದು ಭಯವೇ ಧರ್ಮದ ಮೂಲವಾಗಿದೆ ಎಂದು ಲೇವಡಿ ಮಾಡಿದರು.

ಉರಿಲಿಂಗಿಪೆದ್ದಿಮಠದ ಜಾnನಪ್ರಕಾಶ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಚಿಂತಕಿ ನಂದಾ ಹಳೆಮನೆ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮ್‌, ಚಿಂತಕಿ ಡಾ.ರತಿರಾವ್‌, ರಘೋತ್ತಮ್‌ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next