Advertisement

ಸಿದ್ದರಾಮಯ್ಯ ಸೋಲು ನನ್ನ ಸಾವಿಗಿಂತ ನೋವು: ಸ್ವೀಕರ್‌ ರಮೇಶ್‌ ಕುಮಾರ್

05:20 PM Dec 09, 2018 | Team Udayavani |

ಕೋಲಾರ: ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ನೆನೆದು ವೇದಿಕೆಯಲ್ಲೇ ಕಣ್ಣೀರು ಹಾಕಿದ ಘಟನೆ ಭಾನುವಾರ ನಡೆದಿದೆ.

Advertisement

ಕುರುಬ ಸಮುದಾಯದವರು ಆಯೋಜಿಸಿದ್ದ ಕನಕ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು  ಕುರಿಕಾಯೋ ಸಮುದಾಯದಲ್ಲಿ ಹುಟ್ಟಿ 13 ಬಾರಿ ಬಜೆಟ್‌ ಮಂಡಿಸಿದ ಧೀಮಂತ ನಾಯಕ  ಸಿದ್ದರಾಮಯ್ಯ ಅವರು ಎಂದು ಹಾಡಿ ಹೊಗಳಿದರು.

ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಮಾತನಾಡುವವರಿಗೆ ಪರೋಕ್ಷವಾಗಿ ನಾವು ಬೆಂಬಲ ಕೊಡುತ್ತೇವಾ ಎಂದು ವರ್ತೂರು ಪ್ರಕಾಶ್‌ ಅವರಿಗೆ ಟಾಂಗ್‌ ನೀಡಿದರು.

ನಾವು ಸಿದ್ದರಾಮಯ್ಯ ಅವರಿಗೆ ಕಾಲೊಂದು ಹಿಡಿಯಲಿಲ್ಲ. ಕೋಲಾರಕ್ಕೆ ಬನ್ನಿ ಅಂದು ಆದರೆ ಅವರು ಇಲ್ಲ ಕಣಯ್ಯ ನಾನು ಚಾಮುಂಡೇಶ್ವರಿಯಲ್ಲೇ ಸ್ಪರ್ಧಿಸುವುದು ಎಂದಿದ್ದರು. ಕೋಲಾರಕ್ಕೆ ಬಂದಿದ್ದರೆ ಅವರ ಸೋಲು ಆಗುತ್ತಿರಲಿಲ್ಲ. ಅವರ ಸೋಲು ನನಗೆ ನನ್ನ ಸಾವಿಗಿಂತಲೂ ಹೆಚ್ಚು  ನೋವು ಎಂದು ವೇದಿಕೆಯಲ್ಲೇ ಕಣ್ಣೀರಿಟ್ಟರು. 

ದಯಮಾಡಿ ಪ್ರತಿಜ್ಞೆ ಮಾಡಿ ಈ ಸಮಾಜದ ಜನ ಇಂತಹ ಅನರ್ಘ್ಯ ರತ್ನವನ್ನು ಯಾವ ಕಾರಣಕ್ಕೂ ಕೆಳಕ್ಕೆ ಬೀಳಲು ಬಿಡಬಾರದು ಎಂದು ಮನವಿ ಮಾಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next