Advertisement

SPB ಆರೋಗ್ಯಕ್ಕಾಗಿ ದೇಶದ ಮೂಲೆಗಳಿಂದ ಹರಿದು ಬಂದ ಹಾರೈಕೆ

12:51 AM Aug 16, 2020 | mahesh |

ಚೆನ್ನೈ: ಕೋವಿಡ್‌ನಿಂದಾಗಿ ಗಂಭೀರ ಸ್ಥಿತಿಗೆ ತಲುಪಿ ರುವ ಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ. ಬಾಲ ಸುಬ್ರಹ್ಮಣ್ಯಂ ಅವರ ಚೇತರಿಕೆಗಾಗಿ ದೇಶದ ಮೂಲೆ ಮೂಲೆಗಳಿಂದ ಪ್ರಾರ್ಥನೆಯ ಮಹಾ ಪೂರವೇ ಹರಿದು ಬಂದಿದೆ.

Advertisement

ಮತ್ತೂಂದೆಡೆ, ಚೆನ್ನೈನ ಎಂಜಿಎಂ ಹೆಲ್ತ್‌ ಕೇರ್‌ ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್‌ಪಿಬಿ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅವರನ್ನು ಶುಕ್ರವಾರ ಐಸಿಯುಗೆ ದಾಖಲಿಸ ಲಾಗಿತ್ತು. ಇದು ತಿಳಿಯುತ್ತಿದ್ದಂತೆ, ತೆಲುಗು, ತಮಿಳು ಸೇರಿದಂತೆ ಬಾಲಿವುಡ್‌ ಗಣ್ಯರು, ರಾಜಕೀಯ ನೇತಾರರು ಎಸ್‌ಪಿಬಿಯವರ ಫೇಸ್‌ ಬುಕ್‌ ಹಾಗೂ ಟ್ವಿಟರ್‌ನಲ್ಲಿ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಎಸ್‌ಪಿಬಿ ಆಪ್ತರಾದ ಇಳಯರಾಜಾ, ಎ.ಆರ್‌. ರೆಹ ಮಾನ್‌, ರಜನೀಕಾಂತ್‌ ಅವರ ಪುತ್ರಿ ಸೌಂದರ್ಯ ರಜನೀಕಾಂತ್‌, ಕನ್ನಡ ಮೂಲದ ನಟಿ ಅನುಷ್ಕಾ ಶೆಟ್ಟಿ, ಬಾಲಿವುಡ್‌ನ‌ ಖ್ಯಾತ ನಿರ್ಮಾಪಕ ಬೋನಿ ಕಪೂರ್‌, ಅನಿಲ್‌ ಕಪೂರ್‌ ಅವರ ಪುತ್ರಿ ಸೋನಂ ಕಪೂರ್‌, ನಿರ್ದೇಶಕ ಶೇಖರ್‌ ಕಪೂರ್‌, ಕರಣ್‌ ಜೋಹರ್‌ ಸೇರಿ ಹಲವಾರು ಗಣ್ಯರು ಶುಭ ಹಾರೈಕೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next