Advertisement

ಕೋರ್ಟ್‌ ಆವರಣದಲ್ಲಿ ಕೊಲೆ: ಎಸ್ಪಿ ಭೇಟಿ

04:06 PM Feb 28, 2021 | Team Udayavani |

ಹೊಸಪೇಟೆ: ನಗರದ ಕೋರ್ಟ್‌ ಆವರಣದಲ್ಲಿ ಶನಿವಾರ ಬೆಳಗ್ಗೆ ನಡೆದ ಕಾಂಗ್ರೆಸ್‌ ರಾಜ್ಯ ಎಸ್ಟಿ ಘಟಕದ ಉಪಾಧ್ಯಕ್ಷ, ವಕೀಲ ತಾರಿಹಳ್ಳಿ ವೆಂಕಟೇಶ ಅವರ ಹತ್ಯೆ ಸ್ಥಳಕ್ಕೆ ಜಿಲ್ಲಾವರಿಷ್ಠಾಧಿಕಾರಿ ಸೈದುಲು ಅಡಾವತ್‌ ಪರಿಶೀಲಿಸಿದರು.

Advertisement

ನಂತರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಕುಟುಂಬ ವೈಷಮ್ಯ ಹಾಗೂ ಆಸ್ತಿವಿವಾದ ಹಿನ್ನೆಲೆಯಲ್ಲಿ ಬೆಳಗ್ಗೆ 11-45 ರಿಂದ 12 ಗಂಟೆ ಸಮಯದಲ್ಲಿ ತಾರಿಹಳ್ಳಿ ವೆಂಕಟೇಶ್‌ ಅವರನ್ನು ಹತ್ಯೆ ಮಾಡಲಾಗಿದೆ. ಈ ಘಟನೆ ಕುರಿತಂತೆ ಮೃತ ವೆಂಕಟೇಶ ಅವರ ಸಂಬಂಧಿ ಆರೋಪಿ ಮನೋಜ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಕುಟುಂಬಗಳ ನಡುವೆ ಯಾವುದೇ ವೈಷಮ್ಯ, ಆಸ್ತಿ ವಿವಾದ ಇಲ್ಲ. ತನಿಖೆಯಿಂದ ಸತ್ಯಾಂಶ ಹೊರ ಬೀಳಬೇಕು ಎಂದು ಮೃತ ತಾರಿಹಳ್ಳಿ ವೆಂಕಟೇಶ್‌ ಅವರ ಸಹೋದರ ಆನಂದ ಆಗ್ರಹಿಸಿದರು. ಸಿಪಿಐ ನಾರಾಯಣ, ಗ್ರಾಮೀಣ ಠಾಣೆ ಪಿಐ ಶ್ರೀನಿವಾಸ ಮೇಟಿ ಇನ್ನಿತರರಿದ್ದರು. ಸ್ವಾಂತನ: ಸಚಿವ ಆನಂದ ಸಿಂಗ್‌, ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಹಾಗೂ ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎನ್‌. ಮೊಹಮ್ಮದ್‌ ಇಮಾಮ್‌ ನಿಯಾಜಿ ಇತರರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next