Advertisement

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ : ಗಣಪತಿಹೋಮ, ಮೂಡಪ್ಪ ಸೇವೆ

06:43 PM Feb 16, 2021 | Team Udayavani |

ಬೆಳ್ತಂಗಡಿ : ನಾಡಿನ ಪ್ರಸಿದ್ಧ ಕ್ಷೇತ್ರ ಬಯಲು ಆಲಯ ಗಣಪನೆಂದೇ ಪ್ರಸಿದ್ಧವಾದ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ವೇ|ಮೂ| ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ 108 ಕಾಯಿ ಗಣಪತಿ ಹೋಮ ನೆರವೇರಿತು.

Advertisement

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವರ್ಷಂಪ್ರತಿ ನಡೆಯುವ ಮಾಘಶುದ್ಧ ಚೌತಿಯಂದು ದೇವರಿಗೆ ಮಹಾಗಣಪತಿ ಹೋಮ ನಡೆಯಿತು. ಮಹಾಗಣಪತಿಗೆ ಇಷ್ಟಾರ್ಥ ಪಂಚಕಜ್ಜಾಯ ಸೇವೆ, ಸಹಿತ ವಿವಿಧ ಪೂಜಾ ವಿಧಿ ನೆರವೇರಿತು.

ರಾತ್ರಿ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ ನಡೆದು ಮೂಡಪ್ಪ ಸೇವೆ ನಡೆಯಿತು. ಆಡಳಿತಾಧಿಕಾರಿ ಮಹೇಶ್‌ ಜೆ., ಕಾರ್ಯ ನಿರ್ವಹಣಾಧಿಕಾರಿ ಪಾವಡಪ್ಪ ದೊಡಮನಿ, ಅರ್ಚಕರು, ದೇಗುಲ ಸಿಬಂದಿ, ಭಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next