Advertisement

ಬಿತ್ತನೆ ಬೀಜ ವಿತರಣೆಗೆ ಚಾಲನೆ

03:50 PM Jun 05, 2020 | Suhan S |

ಮುಗಳಖೋಡ: ಪಟ್ಟಣದ ಶ್ರೀ ಮಾಧವಾನಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸರ್ಕಾರದ ಸಹಾಯಧನ ಅಡಿಯಲ್ಲಿ 2020-21 ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣಾ ಕೇಂದ್ರ ತೆರಯಲಾಗಿದೆ.

Advertisement

ಪಟ್ಟಣದ ಸುತ್ತ ಮುತ್ತಲಿನ ಗ್ರಾಮಗಳಾದ ಪಾಲಬಾಂವಿ, ಸುಲ್ತಾನಪುರ, ಕಪ್ಪಲಗುದ್ದಿ, ಮರಾಕುಡಿ, ಹಂದಿಗುಂದ ಗ್ರಾಮಗಳ ರೈತರು ಇದರ ಸದುಪಯೋಗ ಪಡೆಯಬೇಕೆಂದು ತಾಲೂಕಾ ಕೃಷಿ ಅಧಿಕಾರಿ ಪ್ರಶಾಂತ ಸಾಣಿ ಹೇಳಿದರು.

ಖನದಾಳ, ಸವಸುದ್ದಿ, ಕಡಕಭಾಂವಿ, ನಿಡಗುಂದಿ ಭಾಗದ ರೈತರು ತಮಗೆ ಸಮೀಪವಾಗುವ ಅಳಗವಾಡಿಯ ಕನಕದಾಸ ಪಿ.ಕೆ.ಪಿ.ಎಸ್‌. ಅಥವಾ ಮಾಧವಾನಂದ ಪಿ.ಕೆ.ಪಿ.ಎಸ್‌ನಿಂದ ಬೀಜ ಖರೀದಿಸಬಹುದು ಎಂದು ಸಹಾಯಕ ಕೃಷಿ ಅಧಿಕಾರಿ ಎಸ್‌.ಎಮ್‌.ಹೊನ್ನಳ್ಳಿ ತಿಳಿಸಿದರು.

ಎಸ್‌.ಕೆ. ಕುಂಬಾರ, ಶಿವಾನಂದ ಜಂಬಗಿ, ಅಶೋಕ ಗಸ್ತಿ, ವಿಶ್ವನಾಥ ಮಸರಗುಪ್ಪಿ, ಜ್ಞಾನದೇವ ಅಳಗವಾಡಿ, ಸಂಜಯ ಖಾನಟ್ಟಿ, ಮಲ್ಲಪ್ಪ ತಳವಾರ, ಶ್ರೀಶೈಲ ಸಂಗಾನಟ್ಟಿ, ಸದಾಶಿವ ಗೋಕಾಕ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next