Advertisement

ಬಿಜೆಪಿಗೂ ಬರಲಿದೆ ಸಮ್ಮಿಶ್ರ ಸರ್ಕಾರದ ದುಸ್ಥಿತಿ: ಹೊರಟ್ಟಿ

11:26 PM Aug 25, 2019 | Team Udayavani |

ಹುಬ್ಬಳ್ಳಿ: ಆಂತರಿಕ ಒತ್ತಡ ಹೆಚ್ಚಿದರೆ ಸಮ್ಮಿಶ್ರ ಸರ್ಕಾರಕ್ಕೆ ಬಂದ ಸ್ಥಿತಿ ಬಿಜೆಪಿ ಸರ್ಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರಿಗೆ ಹಲವು ನಿರ್ಬಂಧ ಹೇರದೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‌ ಮುಕ್ತ ವಾತಾವರಣ ನೀಡಬೇಕು. ಆಡಳಿತ ನಿರ್ವಹಣೆಯಲ್ಲಿ ಹೈಕಮಾಂಡ್‌ ಅವರನ್ನು ಕಟ್ಟಿ ಹಾಕುವ ಕೆಲಸ ಮಾಡಬಾರದು. ಸಚಿವ ಸಂಪುಟ ರಚನೆ ವಿಳಂಬ, ಖಾತೆ ಹಂಚಿಕೆ ಮಾಡದಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next