Advertisement

ಮಗನ ಹೇಳಿಕೆ ತಿರುಚಲಾಗಿದೆ: ಎಚ್‌.ಡಿ.ರೇವಣ್ಣ

03:45 AM Jul 10, 2017 | Team Udayavani |

ಹಾಸನ: ರಾಜ್ಯದಲ್ಲಿ ಜೆಡಿಎಸ್‌ ಹತ್ತಿಕ್ಕುವ ಷಡ್ಯಂತ್ರ್ಯ ನಡೆದಿದ್ದು, ಪ್ರಜ್ವಲ್‌ ಹೇಳಿಕೆಯನ್ನು ತಿರುಚಿ ಪಕ್ಷದ
ಮುಖಂಡರಿಗೆ ಮುಜುಗರ ಉಂಟು ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ರೇವಣ್ಣ, “ಹುಣಸೂರಿಗೆ ಹೋಗಬೇಡ ಎಂದು ನಾನು ಪ್ರಜ್ವಲ್‌ಗೆ ಹೇಳಿದ್ದೆ. ಆದರೆ
ಎಸ್ಸಿ, ಎಸ್ಟಿ, ಸಮಾವೇಶವಿದೆ ಎಂದು ಕೆಲವರು ಪ್ರಜ್ವಲ್‌ರನ್ನು ಕರೆದುಕೊಂಡು ಹೋಗಿದ್ದರು.

ಆ ಸಭೆಯಲ್ಲಿ ಪ್ರಜ್ವಲ್‌ ಮಾತನಾಡಿದ ದೃಶ್ಯಾವಳಿಗಳನ್ನು ಕತ್ತರಿಸಿ ಪಕ್ಷಕ್ಕೆ ಮುಜುಗರವಾಗುವ ಭಾಗಗಳನ್ನು ಮಾತ್ರ
ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ನನ್ನ ಮಗ ಏನು ಹೇಳಿದ್ದಾನೆಂಬುದು ನನಗೆ ತಿಳಿದಿದೆ.

ಅಂದು ಮಧ್ಯಾಹ್ನ ನಡೆದ ಕಾರ್ಯಕ್ರಮದ ವರದಿ ರಾತ್ರಿ ವೇಳೆಗೆ ಪ್ರಸಾರವಾಗುತ್ತದೆ ಎಂದರೆ ಅದರ ಹಿಂದಿನ ಕುತಂತ್ರವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸಮಯ ಬಂದಾಗ ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದು ಪ್ರಜ್ವಲ್‌ ನಡವಳಿಕೆಯನ್ನು ರೇವಣ್ಣ ಸಮರ್ಥಿಸಿಕೊಂಡರು.

ಪ್ರಜ್ವಲ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಪ್ರಜ್ವಲ್‌ ಸ್ಪರ್ಧಿಸುವುದಿಲ್ಲ. ಈ ವಿಚಾರವನ್ನು ತಿಂಗಳ ಹಿಂದೆಯೇ ಸ್ಪಷ್ಟಪಡಿಸಲಾಗಿದೆ. ನಮ್ಮ ಕುಟುಂಬದಲ್ಲಿ ನಾನು ಮತ್ತು ಕುಮಾರಸ್ವಾಮಿ ಮಾತ್ರ ಚುನಾವಣೆಗೆ ಸ್ಪರ್ಧಿಸುವುದೆಂದು ತೀರ್ಮಾನವಾಗಿದೆ. ಈ ವಿಚಾರದಲ್ಲಿ ಬದಲಾವಣೆಯಿಲ್ಲ.

Advertisement

ಚನ್ನಪಟ್ಟಣ ಕ್ಷೇತ್ರದಲ್ಲಿ ಅನಿತಾಕುಮಾರಸ್ವಾಮಿ ಸ್ಪರ್ಧಿಸಬೇಕೆಂಬ ಕಾರ್ಯಕರ್ತರ ಒತ್ತಡವಿದೆ. ಆದರೂ
ಅನಿತಾಕುಮಾರಸ್ವಾಮಿ ಸ್ಪರ್ಧಿಸುತ್ತೇನೆಂದು ಎಲ್ಲಿಯೂ ಹೇಳಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next