Advertisement

ಸೋನಿಯಾಗೆ ದೇಶದ ಕೇರ್‌ ಇದೆಯೇ: ನಳಿನ್‌

08:47 AM May 23, 2020 | mahesh |

ಮಂಗಳೂರು: ಸೋನಿಯಾ ಗಾಂಧಿಯವರು ಗಾಂಧಿ ಕುಟುಂಬದ ಕೇರ್‌ ಬಿಟ್ಟು ದೇಶದ ಕೇರ್‌ ಮಾಡಿದ್ದಾರೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಪ್ರಶ್ನಿಸಿದ್ದಾರೆ.

Advertisement

ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಪ್ರಧಾನಿ ಪಿಎಂ ಕೇರ್‌ ಫಂಡ್‌ ಬಗ್ಗೆ ಕಾಂಗ್ರೆಸ್‌ ಆಧಾರ ರಹಿತ ಟ್ವೀಟ್‌ ಮಾಡಿದ್ದು, ಇದು ಕಾಂಗ್ರೆಸ್‌ ಪಕ್ಷದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾ ಗಿದೆ. ಯಾವುದೇ ಆದಾರವಿಲ್ಲದೆ ಪ್ರಧಾನಿ ಪಿಎಂ ಕೇರ್‌ ಫಂಡ್‌ ಅನ್ನು ವೈಯಕ್ತಿಕ ಉದ್ದೇಶಕ್ಕಾಗಿ ಬಳಸಿದ್ದಾರೆ ಎನ್ನುವ ಮೂಲಕ ದೇಶದ ಜನರಲ್ಲಿ ಅಪ ನಂಬಿಕೆ ಮೂಡಿಸುವಂತಹ ಕೀಳು ಮಟ್ಟದ ರಾಜಕೀಯವನ್ನು ಕಾಂಗ್ರೆಸ್‌ ಮಾಡುತ್ತಿರುವುದು ಖಂಡನೀಯ ಎಂದರು.

ಆಧಾರರಹಿತ ಸುಳ್ಳು ಸುದ್ದಿ ಹಬ್ಬಿಸು ತ್ತಿರುವವರ ವಿರುದ್ಧ ಸರಕಾರ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಎಫ್‌ಐಆರ್‌ ಹಿಂಪಡೆಯಬಾರದು ಎಂದು ಅವರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next