Advertisement

ಕಳಪೆ ಸಾಧನೆಗೆ ಸೋನಿಯಾ ಬೇಸರ

12:55 AM May 08, 2021 | Team Udayavani |

ಹೊಸದಿಲ್ಲಿ:  ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆ ತುಂಬಾ ಬೇಸರ ತಂದಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಸಂಸದೀಯ ಸಮಿತಿಯ ವರ್ಚ್ಯುವಲ್‌ ಸಭೆಯಲ್ಲಿ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಸಾಧನೆ ಬೇಸರ ತರಿಸಿದೆ.

ಇಂಥ ಕಳಪೆ ಸಾಧನೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಪ್ರತೀ ರಾಜ್ಯದಲ್ಲಿರುವ ಕಾಂಗ್ರೆಸ್‌ ಸಂಸದರು ಇದರಿಂದ ಪಾಠ ಕಲಿಯಬೇಕಾಗಿದೆ. ಸದ್ಯದಲ್ಲೇ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸಭೆ ಜರಗಲಿದ್ದು, ಪಕ್ಷದ ದಯನೀಯ ಸೋಲಿನ ಆತ್ಮವಿಮರ್ಶೆ ಮಾಡಲಾಗುವುದು ಎಂದಿದ್ದಾರೆ. “ದೇಶದಲ್ಲಿ ಕೊರೊನಾ ಸ್ಥಿತಿ ಹದಗೆಡಲು ಸಹಾನುಭೂತಿ ಇಲ್ಲದ ಕೇಂದ್ರ ಸರಕಾರವೇ ಕಾರಣ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next