Advertisement

ಪಕ್ಷ ನಿಮ್ಮೊಂದಿಗಿದೆ ಧೃತಿಗೆಡಬೇಡಿ: ಡಿಕೆಶಿ ಕುಟುಂಬಕ್ಕೆ ಸೋನಿಯಾ ಅಭಯ

09:14 AM Sep 11, 2019 | Team Udayavani |

ಹೊಸದೆಹಲಿ: ಇಡಿ ವಶದಲ್ಲಿರುವ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಡಿ ಕೆ ಶಿವಕುಮಾರ್‌ ಅವರ ಸಹೋದರ ಡಿ.ಕೆ‌.ಸುರೇಶ್‌ರನ್ನು ಮನೆಗೆ ಕರೆಸಿಕೊಂಡು ಮಾತುಕತೆ ನಡೆಸಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷ ನಿಮ್ಮೊಂದಿಗಿದೆ ಧೃತಿಗೆಡಬೇಡಿ ಎಂದು ಭರವಸೆ ಅಭಯ ನೀಡಿದ್ದಾರೆ.

Advertisement

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಜನಪತ್ ನಿವಾಸಕ್ಕೆ ಸುರೇಶ್‌ರನ್ನು ಕರೆಸಿಕೊಂಡಿದ್ದ ಸೋನಿಯಾ ಗಾಂಧಿ ಸುಮಾರು ಅರ್ಧ ಗಂಟೆಗೂ ಹೆಚ್ಚೂ ಕಾಲ ಸೋನಿಯಾ ಮಾತುಕತೆ ನಡೆಸಿದರು.

ಕಾಂಗ್ರೆಸ್ ಪಕ್ಷ ನಿಮ್ಮ ಬೆನ್ನಿಗೆ ಇದೆ. ನೀವು ನಿಮ್ಮ ಕುಟುಂಬ ಧೈರ್ಯವಾಗಿರಿ. ಡಿ.ಕೆ.ಶಿವಕುಮಾರ್ ಅವರಿಗೂ ಧೈರ್ಯ ತುಂಬಿ ಎಂದು ಸೋನಿಯಾ ಗಾಂಧಿ ಅವರು ಶಿವಕುಮಾರ್‌ ಸಹೋದರ ಡಿ.ಕೆ ಸುರೇಶ್‌ ಅವರಿಗೆ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next