Advertisement

ಸೋನಿಯಾ, ಪಟೇಲ್‌ ಅಭಿನಂದನೆ

06:35 AM Aug 10, 2017 | Team Udayavani |

ಬೆಂಗಳೂರು: ಅಹಮದ್‌ ಪಟೇಲ್‌ ಗೆಲುವಿಗೆ ಕಾರಣಕರ್ತರಾಗಿರುವ ಸಚಿವ ಡಿ.ಕೆ.ಶಿವಕುಮಾರ್‌ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಗುಜರಾತ್‌ ಶಾಸಕರಿಗೆ ವಾಸ್ತವ್ಯದ ಜವಾಬ್ದಾರಿ ವಹಿಸಿಕೊಂಡು, ಅವರಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವಲ್ಲಿ ಶ್ರಮ ವಹಿಸಿದ್ದಕ್ಕಾಗಿ ಸೋನಿಯಾ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಅಲ್ಲದೇ, ಸ್ವತಃ ಅಹಮದ ಪಟೇಲ್‌ ಅವರು ಡಿ.ಕೆ.ಶಿವಕುಮಾರ್‌ಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. “ನಮಗೆ ನೆರವು ನೀಡಲು ಮುಂದಾಗಿ ನೀವು ಅಗ್ನಿಪರೀಕ್ಷೆ ಎದುರಿಸಿದ್ದೀರಿ. ನಿಮ್ಮ ಈ ಸೇವೆಯನ್ನು ಹೈಕಮಾಂಡ್‌ ಸದಾ ಗಮನದಲ್ಲಿ ಇಟ್ಟುಕೊಳ್ಳಲಿದೆ’ ಎಂದು ಹೇಳಿದ್ದಾರೆ.

“ಆಪರೇಶನ್‌ ಕಮಲದಿಂದ ತಪ್ಪಿಸಿಕೊಳ್ಳಲು ಶಾಸಕರನ್ನು ಅಲ್ಲಿಗೆ ಕಳುಸಿಕೊಟ್ಟಿದ್ದೆವು ನೀವು ಅವರ ಜವಾಬ್ದಾರಿ ವಹಿಸಿಕೊಂಡು ನನ್ನ ಗೆಲುವಿಗೆ ಕಾರಣರಾಗಿದ್ದೀರಿ. ನಿಮ್ಮ ಆತಿಥ್ಯಕ್ಕೆ ಗುಜರಾತ್‌ ಶಾಸಕರು ಖುಷಿಯಾಗಿದ್ದಾರೆ. ಅವರೆಲ್ಲ ನಿಮಗೆ ಅಭಿನಂದನೆ ಸಲ್ಲಿಸಿದ್ದಾರೆ’ ಎಂದು ಹೇಳಿ, ಫೋನ್‌ ಮೂಲಕವೇ ಗುಜರಾತ್ ಶಾಸಕರ ಚಪ್ಪಾಳೆ ಸದ್ದನ್ನೂ ಡಿಕೆಶಿ ಅವರಿಗೆ ಕೇಳಿಸಿದರೆಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಶಕ್ತಿ ಏನೆಂಬುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಈಗ ಗೊತ್ತಾಗಿದೆ. ಗುಜರಾತ್‌ನಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಮಾಡಲು ನಡೆಸಿದ ತಂತ್ರ ವಿಫಲವಾಗಿದೆ. ಗಾಂಧಿ  ನಾಡಲ್ಲಿ ಬಿಜೆಪಿ ನಡೆಸಿದ ತಂತ್ರಗಾರಿಕೆಗೆ ಕಾಂಗ್ರೆಸ್‌ ಸೂಕ್ತ ಉತ್ತರ ನೀಡಿದೆ.
– ಎಸ್‌.ಆರ್‌.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next