Advertisement

Sonia Gandhi: ವಿಶೇಷ ಅಧಿವೇಶನಕ್ಕೆ ಸೋನಿಯಾ 9 ಅಜೆಂಡಾ

11:55 PM Sep 06, 2023 | Team Udayavani |

ಹೊಸದಿಲ್ಲಿ: ಸೆ.19ರಿಂದ ಐದು ದಿನಗಳ ಕಾಲ ನಡೆಯಲಿರುವ ಸಂಸತ್‌ವಿಶೇಷ ಅಧಿವೇಶನ ದಲ್ಲಿ ಭಾಗಿಯಾ ಗುವುದಾಗಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

Advertisement

ವಿಶೇಷ ಅಧಿವೇಶನದ ವೇಳೆ ಹಲವಾರು ಅಂಶಗಳ ಬಗ್ಗೆ ಪ್ರಸ್ತಾಪಿಸಬೇಕಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ, ಕೋಮುವಾದ, ಮಣಿಪುರ ಹಿಂಸೆ ಮತ್ತು ಗಡಿ ಸಂಘರ್ಷದ ಬಗ್ಗೆ ಚರ್ಚೆ ನಡೆಸಬೇಕಾಗಿದೆ ಎಂದು ಪತ್ರದಲ್ಲಿ ಸೋನಿಯಾ ಗಾಂಧಿ ಅವರು ಉಲ್ಲೇಖೀಸಿದ್ದಾರೆ.

ಅಧಿವೇಶನದ ಅಜೆಂಡಾ ಬಗ್ಗೆ ನಮಗ್ಯಾರಿಗೂ ಗೊತ್ತೇ ಇಲ್ಲ. ಆದರೂ, ದೇಶದ ಹಿತದೃಷ್ಟಿಯಿಂದ ನಾವುಗಳು ಈ ಅಧಿವೇಶನದಲ್ಲಿ ಭಾಗಿಯಾಗುತ್ತೇವೆ ಎಂದಿರುವ ಅವರು, ಒಂಭತ್ತು ಅಂಶಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಅಧಿವೇಶನ ಕರೆಯುವ ಮುನ್ನ ಇತರೆ ರಾಜಕೀಯ ಪಕ್ಷಗಳನ್ನು ಸಂಪರ್ಕಿಸಿಲ್ಲ. ನಮಗ್ಯಾರಿಗೂ ಇದರ ಅಜೆಂಡಾ ಏನು ಎಂಬ ಅರಿವೇ ಇಲ್ಲ. ನಮಗೆ ಬಂದಿರುವ ಮಾಹಿತಿ ಪ್ರಕಾರ, ಐದೂ ದಿನಗಳೂ ಸರ್ಕಾರದ ವ್ಯವಹಾರಗಳಿಗೆ ಮೀಸಲು ಎಂದಿದೆ ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಪ್ರಬಲವಾಗಿ ಆರೋಪಿಸಿದ್ದಾರೆ.

ರಾಜಕೀಯಗೊಳಿಸಲು ಯತ್ನ
ಸಂಸತ್‌ ಅಧಿವೇಶನ ವಿಚಾರದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿನಾ ಕಾರಣ ರಾಜಕೀಯ ಮಾಡುತ್ತಿ ದ್ದಾರೆ. ಹೀಗೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಆರೋಪಿಸಿದ್ದಾರೆ. ಎಲ್ಲಾ ಅಂಶಗಳನ್ನೂ ಪರಿಗಣಿಸಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ. ಪ್ರಜಾಪ್ರಭುತ್ವದ ದೇಗುಲ, ಸಂಸತ್‌ನಲ್ಲಿ ನಡೆಯಲಿ ರುವ ಅಧಿವೇಶನದಲ್ಲಿ ಸೋನಿಯಾ ರಾಜಕೀಯ ಮಾಡುತ್ತಿದ್ದಾರೆ. ಸಂಸತ್‌ ಅಧಿವೇಶನ ಕರೆಯುವು ದಕ್ಕಿಂತ ಮೊದಲು ರಾಜಕೀಯ ಪಕ್ಷಗಳ ಜತೆಗೆ ಚರ್ಚೆ ನಡೆಸುವ ಪದ್ಧತಿ ಇಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next