Advertisement

Theft Case ಹಾಡು ಹಗಲೇ ಮನೆಯಿಂದ ಚಿನ್ನಾಭರಣ ಕಳವು

01:33 AM Jan 17, 2024 | Team Udayavani |

ಕುಂಬಳೆ: ಹಾಡು ಹಗಲೇ ಮನೆಯ ಬೀಗ ಮುರಿದು ಚಿನ್ನಾಭರಣ ಕಳವುಗೈದ ಪ್ರಕರಣ ಪುತ್ತಿಗೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

Advertisement

ಪುತ್ತಿಗೆ ಕುಂಞಿಪದವು ಎಂಬಲ್ಲಿ ಚೇವಾರು ಶಾಲೆಯ ಅಧ್ಯಾಪಕ ಪ್ರಸಾದ ರೈ ಅವರ ಮನೆಯ ಬೀಗ ಮುರಿದ ಕಳ್ಳರು ಮನೆಯೊಳಗೆ ಇರಿಸಿದ ಕೀಲಿಯ ಮೂಲಕ ಕವಾಟಿನ ಬೀಗ ತೆರೆದು ಒಳಗಿದ್ದ 25 ಪವನು ಚಿನ್ನವನ್ನು ಅಪಹರಿಸಿದ್ದಾರೆ. ಈ ವೇಳೆ ಮನೆಯವರೆಲ್ಲರೂ ಹತ್ತಿರದ ದೇವಾಲಯದ ಜಾತ್ರೆಗೆ ತೆರಳಿದ್ದರು.

ಉತ್ಸವ ಮುಗಿಸಿ ಮನೆಗೆ ಮರಳಿದಾಗ ಕಳವು ಆಗಿರುವುದು ತಿಳಿದು ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಯಿತು. ಕಾಸರಗೋಡಿನಿಂದ ಶ್ವಾನದಳ, ಬೆರಳು ತಜ್ಞರು ಮತ್ತು ಡಿವೈಎಸ್‌ಪಿ, ಬದಿಯಡ್ಕ ಸಿಐ, ಮತ್ತು ಎಸ್‌ಐ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದರು. ಪೊಲೀಸ್‌ ನಾಯಿ ಮನೆಯ ಸುತ್ತ ತಿರುಗಿ ರಸ್ತೆಯಲ್ಲಿ ಸಾಗಿ ಬಸ್‌ ತಂಗುದಾಣದ ಬಳಿ ನಿಂತ ಕಾರಣ ಕಳ್ಳರು ಬಸ್ಸಿನಲ್ಲಿ ತೆರಳಿರುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next