Advertisement

ತಂದೆಯ ಸ್ಥಾನಕ್ಕೆ ಮಗನನ್ನು ಗೆಲ್ಲಿಸಿದ ಗ್ರಾಮಸ್ಥರು

12:15 PM Dec 30, 2021 | Team Udayavani |

ಧಾರವಾಡ: ಕೋವಿಡ್ ಮಹಾಮಾರಿಯಿಂದ ಮೃತಪಟ್ಟ ತಾಲೂಕಿನ ನಿಗದಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿದ್ದ ನಾಗಪ್ಪ ದಾಸನಕೊಪ್ಪ ಅವರ ಜಾಗಕ್ಕೆ ಗ್ರಾಮಸ್ಥರು ಇದೀಗ ಅವರ ಮಗನನ್ನೇ ಉಪ ಚುನಾವಣೆಯಲ್ಲಿ ಗೆಲಿಸಿದ್ದಾರೆ.

Advertisement

ನಿಗದಿ ಗ್ರಾಮದ ಒಂದನೇ ವಾರ್ಡ್ ನ ಒಂದು ಸ್ಥಾನಕ್ಕೆ ಜರುಗಿದ ಉಪಚುನಾವಣೆಯಲ್ಲಿ ಜಯಗಳಿಸಿದ ಸಂತೋಷ ನಾಗಪ್ಪ ದಾಸನಕೊಪ್ಪ ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದರು.

ನಾಗಪ್ಪ ಅವರ ನಿಧನದ ನಂತರ ಅವರ ಪತ್ನಿ ಕೂಡ ನಿಧನರಾಗಿದ್ದರು.

ಭಾರಿ ಮತಗಳ ಮುನ್ನಡೆಯಿಂದ ಜಯ ಸಾಧಿಸಿದ ಸಂತೋಷ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಯಾಗಿರುವ ತಹಸಿಲ್ದಾರ ಡಾ.ಸಂತೋಷ ಬಿರಾದಾರ, ಚುನಾವಣಾಧಿಕಾರಿ ವಿ.ಪಿ.ಜಾಕೋಜಿ, ಸಹಾಯಕ ಚುನಾವಣಾಧಿಕಾರಿ ಅರ್ಜುನ ಲಮಾಣಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next