Advertisement

ಜೈ ಶ್ರೀರಾಮ್‌ : ಮಮತಾ ಬ್ಯಾನರ್ಜಿಯಲ್ಲಿ ಏನೋ ಐಬಿದೆ: ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ

08:38 AM Jun 04, 2019 | Sathish malya |

ಕೋಲ್ಕತ : ‘ಜನರು ಜೈ ಶ್ರೀರಾಮ್‌  ಘೋಷಣೆ ಕೂಗುವುದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿಲ್ಲಿಸಿರುವುದು ವಿಚಿತ್ರವೂ ಅಸ್ವಾಭಾವಿಕವೂ ಆಗಿದೆ. ಇದನ್ನು ಗಮನಿಸಿದರೆ ಆಕೆಯಲ್ಲೇನೋ ಐಬಿದೆ ಎಂಬ ಗುಮಾನಿ ಬರುತ್ತದೆ’ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಬಾಬುಲ್‌ ಸುಪ್ರಿಯೋ ಇಂದು ಸೋಮವಾರ ಹೇಳಿದ್ದಾರೆ.

Advertisement

‘ಮಮತಾ ಬ್ಯಾನರ್ಜಿ ಅವರು ಈ ರೀತಿಯ ಕ್ಷುಲ್ಲಕ ನಿರ್ಬಂಧಗಳನ್ನು ಹೇರದೆ ತನ್ನ ಮುಖ್ಯಮಂತ್ರಿ ಸ್ಥಾನದ ಘನತೆ ಗೌರವಗಳನ್ನು ಎತ್ತಿಹಿಡಿಯಬೇಕು’ ಎಂದು ಸುಪ್ರಿಯೋ ಹೇಳಿದರು.

‘ಪಶ್ಚಿಮ ಬಂಗಾಲದಲ್ಲಿ ಬಿಜೆಪಿಯ ಹೆಚ್ಚುತ್ತಿರುವ ಜನಪ್ರಿಯತೆಯಿಂದ ಮಮತಾ ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾರೆ; ಆಕೆ ಕೆಲ ದಿನಗಳ ಮಟ್ಟಿಗೆ ವಿಶ್ರಾಂತಿ ಪಡೆಯುವುದು ಒಳ್ಳೆಯದು’ ಎಂದು ಅಸಾನ್‌ಸೋಲ್‌ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಸುಪ್ರಿಯೋ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next