Advertisement

ಕಾರ್‌ ಡೀಲರ್‌ ನಾಪತ್ತೆ: ಸೋಮೇಶ್ವರ ರುದ್ರಪಾದೆ ಬಳಿ ಕಾರು ಮೊಬೈಲ್‌, ಚಪ್ಪಲಿ ಪತ್ತೆ

10:30 PM Apr 26, 2023 | Team Udayavani |

ಉಳ್ಳಾಲ: ಉಳ್ಳಾಲ ಬಸ್ತಿಪಡ್ಪು ನಿವಾಸಿ ಪ್ರಸ್ತುತ ಉಳ್ಳಾಲದ ಧರ್ಮನಗರದಲ್ಲಿ ವಾಸವಾಗಿರುವ ಉದ್ಯಮಿ ವಸಂತ ಅಮೀನ್‌ (49) ನಾಪತ್ತೆಯಾಗಿದ್ದು, ಅಮೀನ್‌ ಆವರಿಗೆ ಸೇರಿದ ಕಾರು, ಮೊಬೈಲ್‌ ಮತ್ತು ಚಪ್ಪಲಿ ಸೋಮೇಶ್ವರ ರುದ್ರಪಾದೆ ಬಳಿ ಪತ್ತೆಯಾಗಿದ್ದು, ಸಮುದ್ರಕ್ಕೆ ಹಾರಿ ಆತ್ಮಹತ್ಯಗೈದಿರು ಸಾಧ್ಯತೆಯ ಹಿನ್ನಲೆಯಲ್ಲಿ ಸ್ಥಳೀಯ ಈಜುಗಾರರು ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದು ಈವರೆಗೆ ಪತ್ತೆಯಾಗಿಲ್ಲ.

Advertisement

ಹಿಂದೆ ಕಾರು ಬಾಡಿಗೆಗ ನೀಡುತ್ತಿದ್ದ ವಸಂತ್‌ ಅವರು ಮಂಗಳೂರಿನಲ್ಲಿ ಸೆಕೆಂಡ್ಸ್‌ ಕಾರು ಡೀಲ್‌ ಮಾಡುವ ಉದ್ಯಮವನ್ನು ಆರಂಬಿಸಿದ್ದರು, ಬಸ್ತಿಪಡು³ವಿನಲ್ಲಿದ್ದ ಅವರು ಕೆಲವು ತಿಂಗಳ ಹಿಂದೆ ಧರ್ಮನಗರದಲ್ಲಿ ಸುಸಜ್ಜಿತ ಮನೆ ಕಟ್ಟಿ ಅಲ್ಲೇ ವಾಸವಾಗಿದ್ದರು. ಇಂದು ಬೆಳಗ್ಗೆ ಪತ್ನಿಯಲ್ಲಿ ಕೆಲಸಕ್ಕೆ ಹೋಗುತ್ತೇನೆ ಎಂದು ತಿಳಿಸಿದ್ದು, ಕಚೇರಿಗೆ ದೂರವಾಣಿ ಕರೆ ಮಾಡಿ ಅನಾರೋಗ್ಯದ ಕಾರಣ ಕಚೇರಿಗೆ ಬರುವುದಿಲ್ಲ ಎಂದು ತಿಳಿಸಿದ್ದರು. ಮಧ್ಯಾಹ್ನದ ವೇಳೆಗೆ ಸಮುದ್ರ ತೀರಕ್ಕೆ ಬಂದಿದ್ದ ಪ್ರವಾಸಿಗರು ರುದ್ರಪಾದೆಯ ಬಳಿ ಮೊಬೈಲ್‌ ಮತ್ತು ಪರ್ಸ್‌ ಬಟ್ಟೆಯಲ್ಲಿ ಕಟ್ಟಿರುವುದನ್ನು ನೋಡಿ ಅದನ್ನು ಸ್ಥಳೀಯ ಅಂಗಡಿಯಲ್ಲಿದ್ದವರಿಗೆ ಮಾಹಿತಿ ನೀಡಿದ್ದು, ಈ ಸಂದರ್ಭದಲ್ಲಿ ಸ್ಥಳೀಯವಾಗಿ ಕಾರು ಮತ್ತು ಶೂ ಪತ್ತೆಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಮನೆಯವರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳೀಯ ಈಜುಗಾರರ ಸಹಾಯದಿಂದ ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದು, ಈವರೆಗೆ ಪತ್ತೆಯಾಗಿಲ್ಲ. ಪತ್ನಿ, ಪುತ್ರಿಯಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next