Advertisement
ರಾಮಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಭೂ ಹಗರಣವಾಗಿದೆ ಎಂದು ಆರೋಪಗಳನ್ನು ಅಲ್ಲಗಳೆದ ಅವರು, “”ವಿಪಕ್ಷಗಳಲ್ಲಿರುವ ಕೆಲವರು ರಾಮ ಜನ್ಮಭೂಮಿ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದು, ಅವರಿಗೆ ಯಾವುದೇ ಅವಕಾಶವನ್ನು ಕಲ್ಪಿಸುವುದಿಲ್ಲ. ಮೊದಲು, ಶ್ರೀರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದರು.
Related Articles
ಅಯೋಧ್ಯೆಯಲ್ಲಿ ಎರಡು ರಿಯಲ್ ಎಸ್ಟೇಟ್ ಸಂಸ್ಥೆಗಳು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ 1.208 ಹೆಕ್ಟೇರ್ ಭೂಮಿಯನ್ನು 2 ಕೋಟಿ ರೂ.ಗಳಿಗೆ ಪಡೆದು, ಕೇವಲ 10 ನಿಮಿಷಗಳಲ್ಲಿ ಅದನ್ನು ಶ್ರೀರಾಮ ಜನ್ಮಭೂಮಿ ಟ್ರಸ್ಟ್ಗೆ 18.2 ಕೋಟಿ ರೂ.ಗಳಿಗೆ ಮಾರಾಟ ಮಾಡಿವೆ ಎಂದು ಸಮಾಜವಾದಿ ಪಾರ್ಟಿಯ ನಾಯಕ ಪವನ್ ಪಾಂಡೆ ಭಾನುವಾರ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ, ಆಮ್ ಆದ್ಮಿ ಪಾರ್ಟಿ, ಕಾಂಗ್ರೆಸ್, ಶಿವಸೇನೆ ಮತ್ತಿತರ ಪಕ್ಷಗಳು ಪ್ರತಿಕ್ರಿಯಿಸಿ, ಇದೊಂದು ಹಗರಣವಾಗಿದ್ದು ಈ ಕುರಿತಂತೆ ತನಿಖೆಯಾಗಲೇಬೇಕೆಂದು ಆಗ್ರಹಿಸಿದ್ದವು.
Advertisement