Advertisement

ನೀರಿನ ಸಮಸ್ಯೆ ಪರಿಹರಿಸಿ

06:01 PM Dec 15, 2021 | Team Udayavani |

ಇಂಡಿ: ಇಂಡಿ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಬೆಳಗಾವಿಯ ಛಳಿಗಾಲ ಅಧಿವೇಶನಲ್ಲಿ ಧ್ವನಿ ಎತ್ತಿದರು.

Advertisement

ನಮ್ಮ ತಾಲೂಕಿನ ಜನ ಕುಡಿಯುವ ನೀರಿಗೆ ಪರಿತಪಿಸವಂತಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು ನಮ್ಮ ಪಾಲಿನ ನೀರು ಹಂಚಿಕೆ ಮಾಡಬೇಕು. ನೀರಾವರಿ ಯೋಜನೆ ಕುರಿತು ಕಳೆದ ಎರಡು ವರ್ಷದಿಂದ ಪ್ರಶ್ನೆ ಕೇಳುತ್ತ ಬಂದಿದ್ದೇನೆ. ಕುಡಿಯುವ ನೀರಿನ ತೊಂದರೆ ಅನುಭವಿಸುವಂತ ಪ್ರದೇಶ ನಮ್ಮದಾಗಿದ್ದು, ಅಂತಹ ಪ್ರದೇಶಕ್ಕೆ ನೀರು ಬಂದರೆ ಸಮಸ್ಯೆ ಪರಿಹಾರವಾಗಿ ಅನುಕೂಲವಾಗುತ್ತದೆ. ಈ ಕುರಿತು ಸದನದಲ್ಲಿ ಅರ್ಧ ಘಂಟೆವರೆಗೆ ಚರ್ಚೆ ಕೂಡಾ ನಡೆದಿದ್ದು ಮಾಸ್ಟರ್‌ ಪ್ಲ್ಯಾನ್‌ ಕಮಿಟಿಯಲ್ಲಿ ನಿಗದಿ ಪ್ರಕಾರ ನಮಗೆ ನೀರು ಹಂಚಿಕೆ ಮಾಡಿ ಎಂದು ಸಭಾ ಅಧ್ಯಕ್ಷರಿಗೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ನೀರಾವರಿ ಸಚಿವ ಸಚಿವ ಗೋವಿಂದ ಕಾರಜೋಳ, ಇಂಡಿ ಭಾಗದ ನೀರಾವರಿ ಯೋಜನೆಗೆ 3000ಕ್ಕೂ ಅಧಿಕ ಕೊಟಿ ಹಣ ವ್ಯಯವಾಗಲಿದ್ದು ನೀರಾವರಿ ಯೊಜನೆಗಳಿಗೆ ಹಂತ ಹಂತವಾಗಿ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next