Advertisement

ಮಳೆ-ಗಾಳಿಗೆ ಹಾನಿಗೊಂಡ ಬೆಳೆಗೆ ಪರಿಹಾರ: ಜಿಲ್ಲಾಧಿಕಾರಿ

02:35 PM Jun 12, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಏ. 6 ಮತ್ತು 7ರಂದು ಅಕಾಲಿಕ ಆಲಿಕಲ್ಲು ಮಳೆಯಿಂದ ಮತ್ತು ಏ. 19ರಂದು ಸುರಿದ ಮಳೆ ಹಾಗೂ ಬಿರುಗಾಳಿಯಿಂದ ಉಂಟಾದ ಬೆಳೆ ಹಾನಿಗೆ ಸಂಬಂಧಿಸಿ ರೈತರಿಗೆ ಬೆಳೆ ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಏ. 6 ಮತ್ತು 7ರಂದು ಅಕಾಲಿಕ ಆಲಿಕಲ್ಲು ಮಳೆಯಿಂದ ಸುಮಾರು 21,774.06 ಹೆಕ್ಟೇರ್‌ ಪ್ರದೇಶ ಹಾಗೂ ಏ. 19ರಂದು ಸುರಿದ ಮಳೆ ಮತ್ತು ಬಿರುಗಾಳಿಯಿಂದ ಸುಮಾರು 1631.17 ಹೆಕ್ಟೇರ್‌ ಪ್ರದೇಶ ಬೆಳೆ ಹಾನಿಯಾಗಿತ್ತು. ಬೆಳೆಹಾನಿ ಕುರಿತಂತೆ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಬೆಳೆಹಾನಿಯಾದ ಪ್ರದೇಶದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಾನಿಯಾದ ಬೆಳೆಗಳ ವಿವರಗಳನ್ನು ಪರಿಹಾರ ತಂತ್ರಾಂಶದ ಮೂಲಕ 40,295ಕ್ಕೂ ಹೆಚ್ಚು ರೈತರ ಬೆಳೆ ಹಾನಿಯಾದ ವಿವರವನ್ನು ದತ್ತಾಂಶಗಳನ್ನು ದಾಖಲಿಸಿದೆ.

ಈ ಪೈಕಿ ಇದುವರೆಗೂ ಮೊದಲನೆ ಹಂತದಲ್ಲಿ 4,221 ರೈತರಿಗೆ ರೂ. 3.78 ಕೋಟಿ, 2ನೇ ಹಂತದಲ್ಲಿ 9,848 ರೈತರಿಗೆ ರೂ. 8.48 ಕೋಟಿ, 3ನೇ ಹಂತದಲ್ಲಿ 393 ರೈತರಿಗೆ ರೂ. 26 ಲಕ್ಷ, ನಾಲ್ಕನೇ ಹಂತದಲ್ಲಿ 5,422 ರೈತರಿಗೆ ರೂ. 4.72 ಕೋಟಿ ಮತ್ತು 5ನೇ ಹಂತದಲ್ಲಿ 6,186 ರೈತರಿಗೆ ರೂ. 5.44 ಕೋಟಿ ಬೆಳೆ ಪರಿಹಾರವನ್ನು ಪಾವತಿಸಲು ಅನುಮೋದಿಸಿದೆ. ಒಟ್ಟು 26,070 ರೈತರಿಗೆ ಒಟ್ಟು ರೂ. 22.68 ಕೋಟಿ ಬೆಳೆ ಪರಿಹಾರವನ್ನು ಆರ್‌ಟಿಜಿಎಸ್‌ ಮೂಲಕ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ. ಬಾಕಿ ಉಳಿದ ಪ್ರಕರಣಗಳನ್ನು ಸರ್ಕಾರದದಿಂದ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next