Advertisement

ಜಿಗಿತ, ಕುಸಿತಕ್ಕೆ ಪರಿಹಾರ?

10:30 AM Sep 13, 2018 | Team Udayavani |

ಹೊಸದಿಲ್ಲಿ, /ಮುಂಬಯಿ : ಕೈಮೀರಿದ ತೈಲೋತ್ಪನ್ನಗಳ ದರ ಏರಿಕೆ, ಡಾಲರ್‌ ವಿರುದ್ಧ ರೂಪಾಯಿ ಕುಸಿತ ಸೇರಿದಂತೆ ಅರ್ಥ ವ್ಯವಸ್ಥೆಯ ಪ್ರಮುಖ ವಿಚಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಲಿದೆ. ಸಭೆಯಲ್ಲಿ, ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ,ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌, ಪಿಎಂಇಎಸಿ ಮುಖ್ಯಸ್ಥ ಬಿಬೇಕ್‌ ದೇಬ್ರಾಯ್‌ ಹಾಗೂ ಹಣಕಾಸು ಇಲಾಖೆಯ ಕಾರ್ಯದರ್ಶಿ ಹಸ್ಮುಖ್‌ ಆದಿಯಾ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಹಾಲಿ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Advertisement

ಷೇರು ಪೇಟೆ ಚೇತರಿಕೆ: ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಬಾಂಬೆ ಷೇರು ಪೇಟೆ ಬುಧವಾರ ಚೇತರಿಕೆ ಕಂಡಿದೆ. ಬುಧವಾರ ವಹಿವಾಟು ಮುಕ್ತಾಯದ ವೇಳೆಗೆ ಸೂಚ್ಯಂಕ 305ರಷ್ಟು ಏರಿಕೆಯಾಗಿದೆ. ವ್ಯವಹಾರ ಆರಂಭವಾದಾಗ ಸುಸ್ಥಿತಿಯಲ್ಲೇ ಇದ್ದ ಬಿಎಸ್‌ಇ ಸೆನ್ಸೆಕ್ಸ್‌ ಸೂಚ್ಯಂಕ, ಮಧ್ಯಾಹ್ನದ ನಂತರ 37,546.42ಕ್ಕೆ ಬಂದು ನಿಂತು ಒಟ್ಟಾರೆ 304.83 ಅಂಕಗಳಷ್ಟು ಏರಿಕೆ ಕಂಡಿತ್ತು. ಅತ್ತ, ಎನ್‌ಎಸ್‌ಇ ನಿಫ್ಟಿ ಕೂಡ ಗರಿಷ್ಠ 11,340.10ಏರಿಕೆ ದಾಖಲಿಸಿ, ಮಧ್ಯಾಹ್ನದ ನಂತರ 82.40 ಅಂಕಗಳಿಗೆ ಬಂದಿತ್ತು.

ರೂಪಾಯಿ ಚೇತರಿಕೆ: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕದ ಡಾಲರ್‌ ವಿರುದ್ಧ ಸತತ ಇಳಿತ ಕಂಡಿದ್ದ ರೂಪಾಯಿ ಮೌಲ್ಯ ಕೊಂಚ ಏರಿಕೆಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ ಬಳಿಕ ಈ ಬೆಳವಣಿಗೆಯಾಗಿದೆ. ದಿನದ ವಹಿವಾಟು ಆರಂಭದಲ್ಲಿ ಡಾಲರ್‌ ಎದುರು 72.91ಕ್ಕೆ ಇಳಿಕೆಯಾಗಿದ್ದದ್ದು ಸಂಜೆಯ ವೇಳೆಗೆ 72.18 ರೂ.ಗೆ ಚೇತರಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next