Advertisement

ಸತಿ-ಪತಿಗಳಾದ ಸೈನಿಕರು

10:38 AM Feb 14, 2023 | Team Udayavani |

ಕುಂದಾಪುರ: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಯೋಧರು ಕೊಲ್ಲೂರು ಸಮೀಪದ ಯಳಜಿತ್‌ನಲ್ಲಿ ಸತಿ-ಪತಿಗಳಾಗಿ ಹೊಸ ಜೀವನ ಆರಂಭಿಸಿದ್ದಾರೆ. ಬೈಂದೂರು ತಾಲೂಕಿನ ಯಳಜಿತ್‌ನ ಹುಣ್ಸೆಮಕ್ಕಿ ರಮೇಶ್‌ ಗೌಡ ಹಾಗೂ ಪಾರ್ವತಿ ದಂಪತಿಯ ಪುತ್ರಿ ವಿದ್ಯಾ ಅವರ ವಿವಾಹವು ಬಾಗಲಕೋಟೆಯ ಮಹಾಲಿಂಗಪುರ ತಾಲೂಕಿನ ಚಿಮ್ಮದ್‌ ಗ್ರಾಮದ ಪಾರಪ್ಪ ಹಾಗೂ ಲಕ್ಷ್ಮೀ ದಂಪತಿಯ ಪುತ್ರ ಶ್ರೀಶೈಲ್‌ ಎಂ. ಅವರೊಂದಿಗೆ ಯಳಜಿತ್‌ನ ವಧುವಿನ ಮನೆಯಲ್ಲಿ ನೆರವೇರಿದೆ.

Advertisement

ಶ್ರೀಶೈಲ್‌ ಅವರು ರಾಜಸ್ತಾನದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ವಿದ್ಯಾ ಅವರು ಬಾಂಗ್ಲಾ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next