Advertisement

ಅಪಘಾತದಲ್ಲಿ ಮೃತಪಟ್ಟಿದ್ದ ಹುತಾತ್ಮ ಯೋಧನಿಗೆ ಅಂತಿಮ ನಮನ

12:08 PM Jan 07, 2020 | keerthan |

ಗದಗ: ನಿನ್ನೆ ಅಪಘಾತದಲ್ಲಿ ಮೃತಪಟ್ಟಿದ್ದ ತಾಲೂಕಿನ ಮುಳಗುಂದ ಪಟ್ಟಣದ ಯೋಧನ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ಆಗಮಿಸಿದ್ದು, ಪತ್ನಿ, ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

Advertisement

ಭಾರತೀಯ ಸೇನೆಯ ಪುಣೆ ರೆಜಿಮೆಂಟ್‌ನ ಯೋಧ ಬಸವರಾಜ ಶಂಕ್ರಯ್ಯ ಹಿರೇಮಠ (37) ನಿನ್ನೆ ಪುಣೆ ರೈಲ್ವೇ ನಿಲ್ದಾಣದ ಲ್ಲಿ ಕಾಲು ಜಾರಿ ಬಿದ್ದು, ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದು. 15 ದಿನಗಳ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಯೋಧ ಬಸವರಾಜ, ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಪುಣೆಗೆ ತೆರಳುತ್ತಿರುವಾಗ ದುರ್ಘಟನೆ ಸಂಭವಿಸಿದೆ.

ಪುಣೆಯಿಂದ ಮಂಗಳವಾರ ಬೆಳಗ್ಗೆ ಸ್ವಗ್ರಾಮಕ್ಕೆ ಪಾರ್ಥೀವ ಶರೀರ ಆಗಮಿಸಿದ್ದು, ಮನೆಯ ಮುಂಭಾಗದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಯೋಧನ ಅಂತಿಮ ದರ್ಶನಕ್ಕಾಗಿ ಗಣ್ಯರು, ಊರಿನ ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿ, ಪುಷ್ಪ ನಮನ ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next