Advertisement

ಅಂತರ್ಜಾತಿ ವಿವಾಹವಾದ ಜೋಡಿ ಬರ್ಬರ ಹತ್ಯೆ

09:39 AM Jul 06, 2019 | Vishnu Das |

 ತೂತುಕುಡಿ: ಇಲ್ಲಿನ ತಾಂತೈ ಪೆರಿಯಾರ್‌ ನಗರ ಎಂಬಲ್ಲಿ ಅಂತರ್ಜಾತಿ ವಿವಾಹವಾದ ದಂಪತಿಗಳನ್ನು ಬರ್ಬರವಾಗಿ ಕಡಿದು ಹತ್ಯೆಗೈಯಲಾಗಿದೆ. 3 ತಿಂಗಳ ಗರ್ಭಿಣಿಯ ಮೇಲೂ ಕರುಣೆ ತೋರದ ಈ ಮರ್ಯಾದಾ ಹತ್ಯೆ ತಮಿಳು ನಾಡನೇ ಬೆಚ್ಚಿಬೀಳಿಸಿದೆ.

Advertisement

ಸೋಲೈರಾಜ್‌ ಎನ್ನುವ 24 ವರ್ಷದ ಯುವಕ ತನ್ನೊಂದಿಗೆ ಕೆಲಸ ಮಾಡುತ್ತಿದ್ದ 24 ವರ್ಷದ ಜ್ಯೋತಿ ಎಂಬಾಕೆಯನ್ನು ಪ್ರೇಮ ವಿವಾಹವಾಗಿದ್ದ. ಕೆಳ ಜಾತಿಯ ಯುವಕ ಎಂಬ ಕಾರಣಕ್ಕೆ ಜ್ಯೋತಿ ಮನೆಯವರ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಸೋಲೈರಾಜ್‌ ಮನೆಯವರ ಬೆಂಬದೊಂದಿಗೆ ವಿವಾಹವಾಗಿ ಜೊತೆಯಾಗಿ ಸಿಂಗಲ್‌ ಬೆಡ್‌ರೂಂನ ಮನೆಯೊಂದರಲ್ಲಿ ವಾಸವಾಗಿದ್ದರು.

ಜುಲೈ 3 ರ ಬೆಳಗ್ಗೆ 6 ಗಂಟೆಯ ವೇಳೆಗೆ ಇನ್ನೂ ಯಾಕೆ ಎದ್ದೇಳಲಿಲ್ಲ ಎಂದು ಸೋಲೈ ರಾಜ್‌ ಅವರ ತಾಯಿ ರೂಂನ ಒಳಗೆ ತೆರಳಿ ನೋಡಿದಾಗ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಇಬ್ಬರ ಕತ್ತನ್ನು ಕಡಿದು ಬರ್ಬರವಾಗಿ ಹತ್ಯೆಗೈಯಲಾಗಿದೆ. ಜ್ಯೋತಿಯ ಮೊಣಕೈ ಕತ್ತರಿಸಿ ಹಾಕಲಾಗಿತ್ತು.

ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿ ತಕ್ಷಣ ಜ್ಯೋತಿಯ ತಂದೆಯನ್ನು ಬಂಧಿಸಿದ್ದಾರೆ.

Advertisement

ಮನೆಗೆ ನುಗ್ಗಿದ ದುಷ್ಕರ್ಮಿಗಳು ಇಬ್ಬರನ್ನು ಮಲಗಿದ್ದಲ್ಲೇ ಕಡಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next