Advertisement

ಭಾರಿ ಮಳೆಗೆ ಕೊಚ್ಚಿಹೋದ ಸೋಗಲಿ-ಮೂಕಿಹಾಳ ಹಳ್ಳದ ಸೇತುವೆ: ಸಂಪರ್ಕ ಕಡಿತ

10:33 AM Sep 09, 2022 | keerthan |

ವಿಜಯಪುರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಜನರು ನೋಡ ನೋಡುತ್ತಿದ್ದಂತೆ ಸೋಗಲಿ-ಮೂಕಿಹಾಳ ಹಳ್ಳದ ಸೇತುವೆ ಕುಸಿದು, ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ. ಪರಿಣಾಮ ಹಲವು ಗ್ರಾಮಗಳು ತಾಳಿಕೋಟೆ ಪಟ್ಟಣದ ಸಂಪರ್ಕ ಕಳೆದುಕೊಂಡಿವೆ.

Advertisement

ಮಳೆಯ ನೀರಿನ ರಭಸದಿಂದ ಹರಿಯುತ್ತಿರುವ ಕಾರಣ ಸೇತುವೆ ಕುಸಿದು ಬೀಳುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಸೋಗಲಿ-ಮೂಕಿಹಾಳ ಮಧ್ಯದ ಹಳ್ಳದ ಸೇತುವೆ ಕುಸಿದಿರುವ ಕಾರಣ ತಾಳಿಕೋಟೆ ತಾಲೂಕಿನ ಸೋಗಲಿ ಹಾಗೂ ಸುತ್ತಮುತ್ತಲ ಗ್ರಾಮಗಳು ತಾಲೂಕು ಕೇಂದ್ರ ತಾಳಿಕೋಟೆ ಪಟ್ಟಣದ ಸಂಪರ್ಕ ಕಡಿದುಕೊಂಡಿವೆ.

ಇದನ್ನೂ ಓದಿ:ಭಾರತದಲ್ಲಿ 24 ಗಂಟೆಯಲ್ಲಿ 6,093 ಕೋವಿಡ್ ಸೋಂಕು ಪ್ರಕರಣ ಪತ್ತೆ, 33 ಮಂದಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next