Advertisement

“ಸಮಾಜ ಉತ್ತಮ ವ್ಯಕ್ತಿಯಾಗಿ ಗುರುತಿಸಬೇಕು’

08:28 PM May 12, 2019 | Team Udayavani |

ಕುಂಬಳೆ: ಜಿ.ಎಸ್‌.ಬಿ. ಮಹಿಳಾ ಮಂಡಳಿ ಹಾಗೂ ಜಿ.ಎಸ್‌.ಬಿ. ಯುವಕ್‌ ಸಂಘದ ಜಂಟಿ ಆಶ್ರಯದಲ್ಲಿ ನಡೆದ 2ನೇ ವರ್ಷದ ವಸಂತ ಶಿಬಿರದ ಸಮಾರೋಪ ಸಮಾರಂಭವು ಕುಂಬಳೆ ಶ್ರೀ ವೀರ ವಿಠuಲ ದೇವಸ್ಥಾನದ ಸುಧೀಂದ್ರ ತೀರ್ಥ ಕಲಾ ಮಂದಿರದಲ್ಲಿ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿ.ಎಸ್‌.ಬಿ. ಆಲ್‌ ಟೆಂಪಲ್‌ ಅಸೋಸಿಯೇಷನ್‌ ಅಧ್ಯಕ್ಷರಾದ ಕೆ. ಜಗನ್ನಾಥ ಕಾಮತ್‌ ಅವರು ಮಾತನಾಡಿ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಇಲ್ಲಿ ನಿಮಗೆ ಕಲಿಸಿದ ವಿಷಯಗಳನ್ನು ಇನ್ನು ಮುಂದೆಯೂ ನಿಮ್ಮ ಮನೆಗಳಲ್ಲಿ ಅಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳದ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಬಿ. ವಿಕ್ರಂ ಪೈ ವಹಿಸಿದರು.

ಕಾರ್ಯಕ್ರಮದಲ್ಲಿ ಹೇಮಾಪ್ರಕಾಶ್‌ ಶೆಣೈ ಮುಲ್ಕಿ, ಜಿ.ಎಸ್‌. ಬಿ. ಯುವಕ್‌ ಸಂಘದ ಅಧ್ಯಕ್ಷ ಕೆ. ಪ್ರಸಾದ ಜೋಶಿ, ಮಹಿಳಾ ಮಂಡಳಿ ಅಧ್ಯಕ್ಷೆ ಕೆ. ಶಾಂತ ಭಟ್‌, ಪುಂಡಲೀಕ ಭಟ್‌ ಉಪಸ್ಥಿತರಿದ್ದರು. ಯುವಕ್‌ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಸುಧಾಕರ ಕಾಮತ್‌ ಸ್ವಾಗತಿಸಿದರು.

ಪಲ್ಲವಿ ಜೋಶಿ ವಂದಿಸಿದರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಕಲಿಕೋಪರಣ ಮತ್ತು ಸ್ಮರಣಿಕೆ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next