Advertisement

ಸಮಾಜ ಸೇವಕ ಸುಧಾಕರ್ ಶೆಟ್ಟಿ ಮಟ್ಟಿಬೈಲು ನಿಧನ

10:42 AM Jun 20, 2021 | Team Udayavani |

ಉಡುಪಿ:. ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದ ಹಿರಿಯಡ್ಕ, ಪುತ್ತಿಗೆಯ ನಿವಾಸಿ ಸುಧಾಕರ್ ಶೆಟ್ಟಿ ಮಟ್ಟಿ ಬೈಲು,(.56) ಅಲ್ಪಕಾಲದ ಅಸೌಖ್ಯದಿಂದ   ಜೂನ್19ರಂದು   ಸ್ವಗೃಹದಲ್ಲಿ ನಿಧನರಾದರು.

Advertisement

ಮೃತರು ಸಾಮಾಜಿಕ ಚಟುವಟಿಕೆ, ಹಾಗೂ ಈ ಹಿಂದೆ ಪುತ್ತಿಗೆ ಸೇತುವೆ ಉಳಿಸುವಲ್ಲಿ ಹೋರಾಟ ನಡೆಸಿ ಸೈ ಎನಿಸಿಕೊಂಡಿದ್ದರು. ಧಾರ್ಮಿಕ ಕಾರ್ಯಕ್ರಮವಾದ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರತಿವರ್ಷ ಸಾವಿರಾರು ಕದಿರು, ತಾವೇ ಗದ್ದೆಯಲ್ಲಿ ಫಸಲು ಬೆಳೆಸಿ ದೇವಸ್ಥಾನಕ್ಕೆ  ನೀಡಿ ಸೇವೆಗೈಯ್ಯುತ್ತಿದ್ದರು. ಮೃತರು ಪತ್ನಿ, ಹಾಗೂ ಪುತ್ರ ನನ್ನು ಅಗಲಿದ್ದಾರೆ.

ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡು ಹಾಗೂ,  ಕಾಪು ಕ್ಷೇತ್ರದ ದಿವಂಗತ ಮಾಜಿ ಶಾಸಕ ಭಾಸ್ಕರ್ ಶೆಟ್ಟಿ ಅವರ ಜೊತೆ ಕೂಡ ರಾಜಕೀಯ ನಂಟು ಹೊಂದಿದ್ದರು. ಇದೀಗ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದು, ಪರ್ಕಳ ಶಾಮರಾಯ ಸರ್ಕಲ್ ಬಳಿ ಕಟ್ಟಿಗೆ ಡಿಪೋ, ಮತ್ತು ಫರ್ನಿಚರ್ ಅಂಗಡಿ ಹೊಂದಿದ್ದರು,

Advertisement

Udayavani is now on Telegram. Click here to join our channel and stay updated with the latest news.

Next