Advertisement

‘ಸಮಾಜಮುಖಿ ಚಿಂತನೆಯೇ ಆದರ್ಶವಾಗಲಿ’

10:23 AM Apr 02, 2018 | Team Udayavani |

ಸಸಿಹಿತ್ಲು: ಸಂಘ-ಸಂಸ್ಥೆಗಳು ಸಮಾಜಮುಖಿ ಚಿಂತನೆಯ ಮೂಲಕ ಆದರ್ಶವಾದಲ್ಲಿ ಮಾತ್ರ ಎಲ್ಲರೂ ಗೌರವಿಸುತ್ತಾರೆ ಎಂದು ರಂಗಕರ್ಮಿ ಪರಮಾನಂದ ಸಾಲ್ಯಾನ್‌ ಸಸಿಹಿತ್ಲು ಹೇಳಿದರು. ಅವರು ಮುಕ್ಕದ ಮಿತ್ರಪಟ್ಣ ಯುವಕ ಮಂಡಲದ ದಶಮಾನೋತ್ಸವದ ಪ್ರಯುಕ್ತ ಕಡಲ ಕಿನಾರೆಯಲ್ಲಿ ಎ. 1ರಂದು ಗ್ರಾಮೋತ್ಸವ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.

Advertisement

ಕ್ರೀಡಾ ಸ್ಪರ್ಧೆಯನ್ನು ಮಾಜಿ ಕುಸ್ತಿಪಟು ಲಕ್ಷ್ಮಣ ಬಂಗೇರ ಮಿತ್ರಪಟ್ಣ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು. ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಟಿ. ಗಿರೀಶ್‌ ಶೆಟ್ಟಿ, ಗುರಿಕಾರರಾದ ಶಿವರಾಮ, ಮಂಗಳೂರು ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಅಹಲ್ಯಾ ಕಾಂಚನ್‌, ಮಿತ್ರಪಟ್ಣ ಮೊಗವೀರ ಸಂಘದ ಗೌ.ಪ್ರ. ಕಾರ್ಯದರ್ಶಿ ರಾಜೇಶ್‌ ಆರ್‌., ಶ್ರೀರಾಮ ಭಜನ ಮಂದಿರದ ಅಧ್ಯಕ್ಷ ಪ್ರದೀಪ್‌ ಕುಂದರ್‌, ಬಿಜೆಪಿಯ ರಮೇಶ್‌ ಅಮೀನ್‌, ಯುವಕ ಮಂಡಲದ ವಿವಿಧ ಪದಾಧಿಕಾರಿಗಳಾದ ಪುರುಷೋತ್ತಮ ಸುವರ್ಣ, ಶಶಿ ಕರ್ಕೇರ, ವಿಜಯ ಪುತ್ರನ್‌, ನಿತ್ಯಾನಂದ ಸುವರ್ಣ, ಪದ್ಮನಾಭ ಸುವರ್ಣ, ರವೀಂದ್ರ ಕರ್ಕೇರ, ಶ್ರೀರಾಮ ಭಜನ ಮಂದಿರದ ಅರ್ಚಕ ಕಿಶೋರ್‌ಕುಮಾರ್‌, ಮಹಿಳಾ ಮಂಡಲದ ಅಧ್ಯಕ್ಷೆ ಕವಿತಾ ಶರತ್‌ ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಅರುಣ್‌ಕುಮಾರ್‌ ಸ್ವಾಗತಿಸಿದರು, ಅಮೃತ ವರ್ಷಿಣಿಯ ಸಂಚಾಲಕ ಸುನೀಲ್‌ ಸಾಲ್ಯಾನ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next