Advertisement

ನಾಲತವಾಡ: ಪಂಚಮಿ ಮುನ್ನಾದಿನ ಮನೆಯಲ್ಲಿ ಪ್ರತ್ಯಕ್ಷವಾದ ಕರಿ ನಾಗರಹಾವು !

08:04 PM Aug 01, 2022 | Vishnudas Patil |

ನಾಲತವಾಡ: ನಾಗಪಂಚಮಿ ಹಾಲೆರೆಯುವ ಮುನ್ನಾ ದಿನ ಸೋಮವಾರ ಸಂಜೆ ಮಾಜಿ ಸಚಿವೆ ದಿ.ಜೆ.ಎಸ್.ದೇಶಮುಖ್ ಸಂಬಂಧಿ ಶಂಕರರಾವ್ ದೇಶಮುಖ್ ಅವರ ಮನೆಯಲ್ಲಿ ಕರಿ ನಾಗರಹಾವು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

Advertisement

ಆ.೨ ಮಂಗಳವಾರ ನಾಗನಿಗೆ ಹಾಲೆರೆಯುವ ಸಿದ್ದತೆಯನ್ನು ಸಾಮಾನ್ಯವಾಗಿ ಎಲ್ಲರೂ ಮಾಡಿಕೊಳ್ಳುತ್ತಿರುವ ಸಂದರ್ಭ, ಮನೆಯಲ್ಲಿ ನಿಜ ನಾಗರಹಾವು ಕಾಣಿಸಿಕೊಂಡಿದ್ದು ನಾಗಪಂಚಮಿಗೆ ಮತ್ತಷ್ಟು ಅರ್ಥ ಮೂಡಿಸಿದಂತಾಗಿದೆ ಎಂದು ಸ್ಥಳದಲ್ಲಿದ್ದ ಜನ ಮಾತನಾಡಿಕೊಳ್ಳುತ್ತಿದ್ದುದು ಕಂಡು ಬಂದಿತು.

ನಂತರ ನಾಗರಹಾವನ್ನು ಉರಗ ತಜ್ಞ ಮಾರುತಿ ಗುರಿಕಾರ ಎಂಬ ಯುವಕ ಜಮೀನೊಂದರಲ್ಲಿ ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next