Advertisement

ಆಟವಾಡುತ್ತಿದ್ದ ಮಕ್ಕಳಿಗೆ ಹಾವು ಕಚ್ಚಿ ಸಾವು

11:21 PM May 15, 2019 | Team Udayavani |

ಘಟಪ್ರಭಾ (ಬೆಳಗಾವಿ): ಮಕ್ಕಳನ್ನು ಆಟವಾಡಲು ಬಿಟ್ಟು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಆಟದಲ್ಲಿ ತೊಡಗಿದ್ದ ಮಕ್ಕಳಿಗೆ ಹಾವು ಕಚ್ಚಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಸಮೀಪದ ರಾಜಾಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

Advertisement

ಗ್ರಾಮದ ಕಟ್ಟಿಕಾರ ತೋಟದಲ್ಲಿ ಸಿದ್ದಪ್ಪ ಭೀಮಪ್ಪಾ ಕಟ್ಟಿಕಾರ ದಂಪತಿಗಳು ತಮ್ಮ ಮಕ್ಕಳಾದ ಕಾವೇರಿ (6) ಹಾಗೂ ಮುತ್ತುರಾಜ (6 ತಿಂಗಳು)ನನ್ನು ತಮ್ಮ ಹೊಲದ ಪಕ್ಕದಲ್ಲಿ ಆಟವಾಡಲು ಬಿಟ್ಟು, ಕೆಲಸದಲ್ಲಿ ತೊಡಗಿದ್ದರು. ಆಗ ಹಾವು ಕಚ್ಚಿ, ಅವರಿಬ್ಬರೂ ಮೃತಪಟ್ಟರು.

ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ತಹಶೀಲ್ದಾರ ಮುರಳೀಧರ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರರನ್ನು ಭೇಟಿಯಾದ ರೈತ ಸಂಘದ ಕಾರ್ಯಕರ್ತರು ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next