Advertisement

ಅಂಚೆ ಕಚೇರಿಯಲ್ಲಿ ನಾಗನ ದರ್ಶನ 

03:16 PM Sep 22, 2018 | |

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಅಂಚೆ ಕಚೇರಿಗೆ ನುಸುಳಿದ ನಾಗರಹಾವೊಂದು ಭೀತಿ ಮೂಡಿಸಿದ ಘಟನೆ ಗುರುವಾರ ನಡೆದಿದೆ. ಕಚೇರಿಯೊಳಗೆ ಹಾವು ಬುಸುಗಟ್ಟುತ್ತಿರುವುದು ಕಚೇರಿಯ ಸಿಬಂದಿ ಎಂ. ನರಸಿಂಹ ಭಟ್‌ ಅವರ ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ಅದು ಸಾಮಾನ್ಯ ಗಾತ್ರದ ನಾಗರಹಾವೆಂದು ಗೊತ್ತಾಗಿತ್ತು. ಸಿಬಂದಿ ಕಚೇರಿಯಿಂದ ಹೊರಬಂದರೂ, ಹಾವು ಅಲ್ಲೇ ಠಿಕಾಣಿ ಹೂಡಿದ್ದರಿಂದ ಕರ್ತವ್ಯ ನಿರ್ವಹಣೆ ಕಷ್ಟವಾಯಿತು.

Advertisement

ಈ ಕುರಿತು ಉಪ್ಪಿನಂಗಡಿ ಅಂಚೆ ಕಚೇರಿಗೆ ಮಾಹಿತಿ ನೀಡಿದ ಬಳಿಕ ಉಪ್ಪಿನಂಗಡಿಯ ಸ್ನೇಕ್‌ ಝಕಾರಿಯಾ ಅವರ ಸಹಕಾರದಿಂದ ಹಾವನ್ನು ಹಿಡಿದು ರಕ್ಷಿತಾರಣ್ಯದೊಳಗೆ ಸುರಕ್ಷಿತವಾಗಿ ಬಿಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next