Advertisement

ರೈಲು ಚಕ್ರದಲ್ಲಿ ಹೊಗೆ: ಆತಂಕಗೊಂಡ ಪ್ರಯಾಣಿಕರು

03:29 PM Mar 13, 2023 | keerthan |

ವಿಜಯಪುರ: ಚಲಿಸುವ ರೈಲಿನ ಚಕ್ರದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಹೊಗೆಯಿಂದಾಗಿ ಪ್ರಾಯೋಗಿಕ ರೈಲು ಕೆಲಕಾಲ ಸಂಚಾರ ಸ್ಥಗಿತಗೊಳಿಸಿದ್ದ ಘಟನೆ ವರದಿಯಾಗಿದೆ.

Advertisement

ಸೋಲ್ಲಾಪುರದಿಂದ ಗದಗ ಕಡೆಗೆ ಹೊರಟಿದ್ದ ಪ್ರಾಯೋಗಿಕ ರೈಲು ವಿಜಯಪುರ ಬಳಿಯ ಮಿಂಚನಾಳ – ಅಲಿಯಾಬಾದ ಮಧ್ಯೆ ಸಂಚರಿಸುವಾಗ ಇದ್ದಕ್ಕಿದ್ದಂತೆ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ರೈಲು ನಿಲ್ಲಿಸಿದ ಲೋಕೋ ಪೈಲಟ್ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಅಂತಿಮ ಎಸೆತದಲ್ಲಿ ಟೆಸ್ಟ್ ಪಂದ್ಯ ಗೆದ್ದ ಕಿವೀಸ್; ಚಾಂಪಿಯನ್ ಶಿಪ್ ಫೈನಲ್ ಆಸೆ ಬಿಟ್ಟ ಲಂಕಾ

ಈ ಹಂತದಲ್ಲಿ ಆತಂಕಗೊಂಡ ಪ್ರಯಾಣಿಕರೂ ರೈಲಿನಿಂದ ಕೆಳಗೆ ಇಳಿದಿದ್ದಾರೆ. ಗಾರ್ಡ ತಪಾಸಣೆ ಬಳಿಕ, ಸಮಸ್ಯೆ ಇಲ್ಲವೆಂದು ಖಚಿತಪಡಿಸಿಕೊಂಡು ರೈಲು ಸಂಚಾರ‌ ಮುಂದುವರೆಸಿತು.

ಸದರಿ ಘಟನೆಯಿಂದ ರೈಲು ಸಂಚಾರದಲ್ಲಿ ಕೆಲಕಾಲ ವಿಳಂಬವಾಗಿದ್ದು, ಸುಮಾರು 2-3 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next