Advertisement

Train ಕುಂದಾಪುರದಲ್ಲಿ ವಂದೇ ಭಾರತ್‌ ರೈಲು ನಿಲುಗಡೆ ಇಲ್ಲ

11:23 PM Jul 25, 2024 | Team Udayavani |

ಉಡುಪಿ: ಮಂಗಳೂರು -ಮಡ್‌ಗಾಂವ್‌ ಮಧ್ಯೆ ಸಂಚರಿಸುವ ವಂದೇ ಭಾರತ್‌ ರೈಲು ಸೇವೆಯನ್ನು ಕುಂದಾಪುರ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕುಂದಾಪುರ ರೈಲು ನಿಲ್ದಾಣದಲ್ಲೂ ನಿಲುಗಡೆ ಮಾಡಬೇಕು ಎಂದು ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ಕೊಂಕಣ ರೈಲ್ವೆ ತಿರಸ್ಕರಿಸಿದೆ. ವಂದೇಭಾರತ್‌ ರೈಲು ಕುಂದಾಪುರ ದಲ್ಲಿ ನಿಲುಗಡೆ ನೀಡಬೇಕು.

Advertisement

ಇದರಿಂದ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲ ವಾಗಲಿದೆ ಎಂದು ಈ ಹಿಂದೆ ಉಡುಪಿ- ಚಿಕ್ಕಮಗಳೂರು ಸಂಸದರಾಗಿದ್ದ ಶೋಭಾ ಕರಂದ್ಲಾಜೆ ಅವರು ಕೊಂಕಣ ರೈಲ್ವೇಗೆ ಪತ್ರ ಬರೆದಿದ್ದರು.

ಈ ಪತ್ರಕ್ಕೆ ಉತ್ತರಿಸಿರುವ ಕೊಂಕಣ ರೈಲ್ವೇ ಸಂತೋಷ್‌ ಕುಮಾರ್‌ ಝಾ ಅವರು, ರೈಲ್ವೇ ಬೋರ್ಡ್‌ನ ನಿರ್ಧಾರದಂತೆ ಉಡುಪಿ ಮತ್ತು ಕಾರವಾರದಲ್ಲಿ ನಿಲುಗಡೆ ಇದೆ. ಕುಂದಾಪುರದಲ್ಲಿ ನಿಲುಗಡೆ ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next