Advertisement

ಮೈದಾನ ಹಾಳು ಮಾಡಿ ಯಾವ ಸ್ಮಾರ್ಟ್‌ಸಿಟಿ ಕಟ್ಟುತ್ತೀರಿ? : ಪಾಲಿಕೆಗೆ ಹೈಕೋರ್ಟ್‌ ಪ್ರಶ್ನೆ

04:29 PM Jan 13, 2021 | Team Udayavani |

ಬೆಂಗಳೂರು: ಸುತ್ತಲು ಹಸಿರು ಹೊಂದಿರುವ ಆಟದ ಮೈದಾನವನ್ನು ಹಾಳುಮಾಡಿ ಅಲ್ಲಿ ಮಾರುಕಟ್ಟೆ ನಿರ್ಮಾಣ ಮಾಡುವುದು ಅದ್ಯಾವ ಸ್ಮಾರ್ಟ್‌ ಸಿಟಿ ಕಲ್ಪನೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಹೈಕೋರ್ಟ್‌ ಪ್ರಶ್ನಿಸಿದೆ.
ಹಳೆ ಹುಬ್ಬಳ್ಳಿಯ ಅಂಬೇಡ್ಕರ್‌ ಆಟದ ಮೈದಾನದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಮಾರುಕಟ್ಟೆ ನಿರ್ಮಾಣಕ್ಕೆ ಆಕ್ಷೇಪಿಸಿ
ಸ್ಥಳೀಯ ನಿವಾಸಿಗಳಾದ ನವೀನ್‌ ಪ್ರಭು ನವಲೂರು ಹಾಗೂ ಬಶೀರ್‌ ಅಹ್ಮದ್‌ ಜಿ. ಸವಣೂರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

Advertisement

ಈ ವೇಳೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಪರ ವಕೀಲರು, ವಲಯ ನಿಯಂತ್ರಣ’ (ಜೋನಲ್‌ ರೆಗ್ಯುಲೇಷನ್‌) 11.9 ದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶವಿದೆ. ಆಟದ ಮೈದಾನದಲ್ಲಿ
ತಾತ್ಕಾಲಿಕವಾಗಿ 150 ಮಂದಿ ವ್ಯಾಪಾರಸ್ಥರನ್ನು ಸ್ಥಳಾವಕಾಶ ಕಲ್ಪಿಸಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಸ್ಮಾರ್ಟ್‌ ಸಿಟಿ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಇದನ್ನೂ ಓದಿ:ಬರುವೆನೆಂದು ಬಾರದ ಸಚಿವ; ಕಾಯುತ್ತ ಕುಳಿತಿದ್ದ ನಿವಾಸಿಗಳು

ಮಾರುಕಟ್ಟೆಯನ್ನು ಆಟದ ಮೈದಾನಕ್ಕೆ ಸ್ಥಳಾಂತರ ಮಾಡಿದರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸ್ಮಾರ್ಟ್‌ ಆಗುತ್ತಾ, ಸುತ್ತಲು
ಹಸಿರು ಹೊಂದಿರುವ ಆಟದ ಮೈದಾನದಲ್ಲಿ ಮಾರುಕಟ್ಟೆ ನಿರ್ಮಿಸಿ ಅದನ್ನು ಹಾಳು ಮಾಡುವುದು ಅದ್ಯಾವ ಸ್ಮಾರ್ಟ್‌ ಸಿಟಿ
ಕಲ್ಪನೆ. ಅಷ್ಟಕ್ಕೂ ವಲಯ ನಿಯಂತ್ರಣದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶವಿಲ್ಲ. ತಾತ್ಕಾಲಿಕವಾಗಿಯೂ ಅಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶ ನೀಡಲ್ಲ ಎಂದು ಹೇಳಿತು.

ಆಗ ಪಾಲಿಕೆ ಪರ ವಕೀಲರು ಈಗಿರುವ ಮಾರುಕಟ್ಟೆ ತುಂಬಾ ಹಳೆಯದಾಗಿದ್ದು, ಅಲ್ಲಿರುವ ವ್ಯಾಪಾರಿಗಳನ್ನು
ಸ್ಥಳಾಂತರಿಸಬೇಕಾಗಿದೆ. ಪರ್ಯಾಯ ಜಾಗಕ್ಕೆ ಸಾಕಷ್ಟು ಪ್ರಯತ್ನ ನಡೆಸಲಾಗಿದೆ. ಆದರೆ ಎಲ್ಲಿಯೂ ಪರ್ಯಾಯ ಜಾಗ ಲಭ್ಯವಾಗಿಲ್ಲ. ಆದ್ದರಿಂದ 150 ಮಂದಿ ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ಆಟದ ಮೈದಾನದಲ್ಲಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದರು. ಇದಕ್ಕೆ ಒಪ್ಪದ ನ್ಯಾಯಪೀಠ, ಪರ್ಯಾಯ ಜಾಗ ಸಿಗದಿರುವುದು ಪಾಲಿಕೆ ಸಮಸ್ಯೆ, ಬದಲಿ ಜಾಗ ಸಿಕ್ಕಿಲ್ಲ ಎಂದು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಆಟದ ಮೈದಾನದಲ್ಲಿ ಮಾರುಕಟ್ಟೆ ನಿರ್ಮಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿತು.

Advertisement

ಅಲ್ಲದೇ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂಬೇಡ್ಕರ್‌ ಆಟದ ಮೈದಾನದಲ್ಲಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ 2020ರ ಸೆ.25ರಂದು ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿ ನ್ಯಾಯಪೀಠ ಆದೇಶಿಸಿತು. ಅರ್ಜಿದಾರರ ಪರ ವಕೀಲ ಜಿ. ಬಾಲಕೃಷ್ಣ ಶಾಸ್ತ್ರೀ ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next