Advertisement

ಮೋದಿ ಹೆಸರು ಹೇಳಿಕೊಂಡು ಬರುವವರ ದವಡೆಗೆ ಬಾರಿಸಿ!

10:43 AM Mar 25, 2019 | Team Udayavani |

ಮಂಡ್ಯ: ಸಕ್ಕರೆ ನಾಡಿನಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿದೆ. ಮಾತ್ರವಲ್ಲದೇ ರಾಜಕೀಯ ನಾಯಕರ ನಡುವೆ ಆರೋಪ – ಪ್ರತ್ಯಾರೋಪಗಳ ಭರಾಟೆಯೂ ಕಾವೇರುತ್ತಿದೆ. ಮೊನ್ನೆ ತಾನೆ ಜೆಡಿಎಸ್‌ ಶಾಸಕರೊಬ್ಬರು ಸುಮಲತಾ ಅವರ ಪರ ಪ್ರಚಾರಕ್ಕೆ ನಿಂತಿರುವ ಸ್ಯಾಂಡಲ್‌ ವುಡ್‌ ತಾರೆಗಳಿಗೆ ಧಮ್ಕಿ ಹಾಕಿರುವ ಬೆನ್ನಲ್ಲೇ ಇಂದು ಇನ್ನೋರ್ವ ಜೆಡಿಎಸ್‌ ಶಾಸಕ ಶಿವಲಿಂಗೇ ಗೌಡ ಅವರು ಪ್ರಧಾನಿ ಮೋದಿ ವಿರುದ್ಧ ತಮ್ಮ ನಾಲಗೆಯನ್ನು ಹರಿಯಬಿಟ್ಟಿದ್ದಾರೆ.

Advertisement

ತಮ್ಮ ಕ್ಷೇತ್ರದಲ್ಲಿ ನಿಖಿಲ್‌ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಶಾಸಕ ಶಿವಲಿಂಗೇ ಗೌಡ ಅವರು ‘ಮೋದಿ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಹೇಳಿ ಜನರಿಗೆ ಮೋಸ ಮಾಡಿದ್ದಾರೆ. ಜನಪರವಾದ ಯಾವ ಕಾರ್ಯವನ್ನೂ ಅವರು ಮಾಡಿಲ್ಲ. ಹಾಗಾಗಿ ಈ ಬಾರಿ ಮೋದಿ ಮೋದಿ ಎಂದು ಹೇಳಿಕೊಂಡು ನಿಮ್ಮ ಮನೆ ಬಾಗಿಲಿಗೆ ಬರುವವರ ದವಡೆ ಮೇಲೆ ಬಾರಿಸಿ ಕೇಳಿ..’ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next