Advertisement
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ನ ಬಿ.ಎ.ಬಾವಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿಯೇ ಪ್ರತ್ಯೇಕ ಇಲಾಖೆ ಸ್ಥಾಪಿಸಲಾಗುವುದು. ಅದರ ಉಸ್ತುವಾರಿ ನಾನೇ ವಹಿಸುತ್ತೇನೆ ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ 7,8, 9 ನೇ ತರಗತಿ ವ್ಯಾಸಂಗ ಮಾಡಿರುವವರಿಗೆ ಮೊದಲ ಹಂತದಲ್ಲಿ ಕೌಶಲ್ಯ ತರಬೇತಿ ನೀಡಲಾಗುವುದು.
Related Articles
Advertisement
“ಚಮ್ಮಾರಿಕೆ ಮಾಡೋರು ಅದೇ ಮಾಡಬೇಕು, ಕುಂಬಾರಿಕೆ ಮಾಡೋರು ಅದೇ ಮಾಡಬೇಕು ಎಂಬ ಭಾವನೆ ಬೇಡ. ಅದರಿಂದಲೇ ಜಾತಿ ವ್ಯವಸ್ಥೆ ಜಾಸ್ತಿ. ಇವನಾರವ ಇವನಾರವ ಎನ್ನದಿರಯ್ಯ , ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎಂಬ ಬಸವಣ್ಣನವರ ವಚನ ಹೇಳುತ್ತಲೇ ನಿಮ್ಮ ಜಾತಿ ಯಾವುದು ಎಂದು ಕೇಳುವ ಸ್ಥಿತಿ ಈಗಲೂ ಇದೆ,’ ಎಂದು ಹೇಳಿದರು.
ಹುಡ್ಗಿàರು ಮಾಡೋ ಹೇರ್ಕಟ್ಗೆ ದುಡ್ಡು ಜಾಸ್ತಿ: ಕೌಶಲ್ಯ ತರಬೇತಿ ಪ್ರಸ್ತಾಪದ ಸಂದರ್ಭದಲ್ಲಿ ಹೇರ್ಕಟ್ ವಿಚಾರದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ “ದೆಹಲಿಯಲ್ಲಿ ಹತ್ತು ವರ್ಷದ ಹಿಂದೆ ಪಂಚತಾರಾ ಹೋಟೆಲ್ಗೆ ನಾನು ಹೇರ್ಕಟ್ ಮಾಡಿಸಿಕೊಳ್ಳಲು ಹೋದಾಗ 200 ರೂ. ಪಡೆದರು. ನಮ್ಮ ಊರಲ್ಲಿ ಆಗ ತುಂಬಾ ಕಡಿಮೆ ಕೊಡುತ್ತಿದ್ದೆ. ಅಷ್ಟು ದರ ನೋಡಿ ಆಗಲೇ ಅಚ್ಚರಿಗೊಂಡಿದ್ದೆ,’ ಎಂದರು.
ಆಗ ಬಿಜೆಪಿಯ ಸಿ.ಟಿ.ರವಿ, “ಈಗ ಇನ್ನೂ ಜಾಸ್ತಿ ತಗೋತಾರೆ, ಎಂ.ಬಿ.ಪಾಟೀಲ್ ಅಥವಾ ಜಾರ್ಜ್ ಅವರನ್ನು ಕೇಳಿ,’ ಎಂದು ಚಟಾಕಿ ಹಾರಿಸಿಸದರು. ಅದಕ್ಕೆ ಕಾಂಗ್ರೆಸ್ನ ಕೆ.ಎನ್.ರಾಜಣ್ಣ, “ಸಾರ್, ಈಗ ಸ್ಟಾರ್ ಹೋಟೆಲ್ಗಳಲ್ಲಿ ಹುಡುಗೀರು ಕಟಿಂಗ್ ಮಾಡಿದರೆ ಜಾಸ್ತಿ ದುಡ್ಡು, ಹುಡುಗರು ಮಾಡಿದರೆ ಕಡಿಮೆ ದುಡ್ಡು ಸಾರ್,’ ಎಂದು ಹೇಳಿದಾಗ ಸದನದಲ್ಲಿ ನಗೆ ಅಲೆ.