Advertisement

ಕಿವಿಗೆ ಇಯರ್‌ ಫೋನ್‌ ಹಾಕಿಕೊಂಡಿದ್ದ 6 ಯುವಕರು ರೈಲಿಗೆ ಬಲಿ

03:35 PM Feb 26, 2018 | udayavani editorial |

ಲಕ್ನೋ : ಕಿವಿಗೆ ಇಯರ್‌ ಫೋನ್‌ ಸಿಕ್ಕಿಸಿಕೊಂಡು ಸಂಗೀತ ಕೇಳುತ್ತಾ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ  ಆರು ಮಂದಿ ಯುವಕರು ರೈಲು ಹರಿದು ದಾರುಣವಾಗಿ ಮೃತ ಪಟ್ಟ ದಾರುಣ ಘಟನೆ ಇಂದು ಸೋಮವಾರ ನಸುಕಿನ ವೇಳೆ ಉತ್ತರ ಪ್ರದೇಶದ ಹಾಪುರ್‌ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪೀಲಾಖುಂವಾ ಸಮೀಪ ರೈಲು ಹಳಿಯಲ್ಲಿ ನಡದಿರುವ ಈ ಘಟನೆಯಲ್ಲಿ ಒಟ್ಟು ಏಳು ಮಂದಿ ಯುವಕರು ರೈಲು ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಇವರೆಲ್ಲರೂ ತಮ್ಮ ಕಿವಿಗೆ ಇಯರ್‌ ಫೋನ್‌ ಸಿಕ್ಕಿಸಿಕೊಂಡು ಸಂಗೀತ ಆಲಿಸುತ್ತಾ ಹೋಗುತ್ತಿದ್ದರು. ಹಾಗಾಗಿ ಇವರಿಗೆ ರೈಲು ತಮ್ಮ ಮೈಮೇಲೆ ಏರಿ ಬರುವ ತನಕವೂ ಗೊತ್ತಾಗಲೇ ಇಲ್ಲ  ಎಂದು ಪೊಲೀಸರು ಹೇಳಿದ್ದಾರೆ. 

ಮೃತಪಟ್ಟ ಆರು ಮಂದಿ ಪೇಂಟಿಂಗ್‌ ವೃತ್ತಿ ಮಾಡಿಕೊಂಡಿದ್ದ ಕೂಲಿ ಕಾರ್ಮಿಕರು. ಇವರು ಗಾಜಿಯಾಬಾದ್‌ ನಿಂದ ಬರುವ ರೈಲನ್ನು ಹತ್ತುವವರಿದ್ದರು. ಹೈದರಾಬಾದ್‌ನಲ್ಲಿ ಇವರಿಗೆ ಪೇಂಟಿಂಗ್‌ ಗುತ್ತಿಗೆ ಸಿಕ್ಕಿತ್ತು. ಆದರೆ ಇವರಿಗೆ ಆ ರೈಲು ತಪ್ಪಿಹೋಗಿತ್ತು. ಹಾಗಾಗಿ ಇವರು ಪೀಲಾಖುಂವಾ ಗೆ ಮರಳಲು ರೈಲು ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದರು. 

ಮೃತ ಯುವಕರನ್ನು ಸಲೀಂ, ಆರಿಫ್, ಸಮೀರ್‌, ಆಕಾಶ್‌, ರಾಹುಲ್‌ ಮತ್ತು ವಿಜಯ್‌ ಎಂದು ಗುರುತಿಸಲಾಗಿದೆ. ಇನ್ನೊಬ್ಬ, ಏಳನೇ ವ್ಯಕ್ತಿ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next