Advertisement

Police: ಇಸ್ಪೀಟ್‌ ಅಡ್ಡೆಗೆ ದಾಳಿ – ಆರು ಮಂದಿ ವಶಕ್ಕೆ

12:53 AM Nov 03, 2023 | Team Udayavani |

ಮೂಡುಬಿದಿರೆ: ಬೆಳು ವಾಯಿಯ ಮುಡಾಯಿಕಾಡು ಎಂಬಲ್ಲಿ ಮಂಗಳವಾರ ತಡರಾತ್ರಿ 6 ಜನರು ಅಂದರ್‌ ಬಾಹರ್‌ (ಇಸ್ಪೀಟ್‌) ಆಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಮತ್ತು ತಂಡದವರು ದಾಳಿ ನಡೆಸಿ ಆರೋಪಿಗಳಿಂದ 9 ಸಾವಿರ ರೂ. ನಗದು, ಕಾರು ಮತ್ತು ಬೈಕ್‌ ಅನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರಗಿಸಿದ್ದಾರೆ.

Advertisement

ಬೆಳುವಾಯಿ ಅಬ್ಟಾಯಿ ಕಜೆ ಮಹೇಂದ್ರ ಕುಮಾರ್‌ , ದರೆಗುಡ್ಡೆ ಕುಂದೊಟ್ಟು ಹೌಸ್‌ ಸಂತೋಷ್‌ ಪೂಜಾರಿ, ಮೂಡಾಯಿಕಾಡು ಗ್ರೀಸ್‌ ಕಾಂಪ್ಲೆಕ್ಸ್‌ ನ ಸಂತೋಷ್‌, ಬೆಳುವಾಯಿ ಚರ್ಚ್‌ ಬಳಿಯ ವಿನ್ಸೆಂಟ್‌ ರೋಡ್ರಿಗಸ್‌, ದೇವಿ ನಗರದ ರಾಮ/ರಾಮಚಂದ್ರ ಮತ್ತು ದರೆಗುಡ್ಡೆ ಪ್ರಭಾ ನಿವಾಸದ ಪ್ರದೀಪ್‌ ಸುವರ್ಣ ಬಂಧಿತ ಆರೋಪಿಗಳು.

Advertisement

Udayavani is now on Telegram. Click here to join our channel and stay updated with the latest news.

Next