Advertisement
ಇಂದಿರಾನಗರದ ನಿವಾಸಿ ರೌಡಿಶೀಟರ್ ರಾಮಚಂದ್ರ (29), ಸಂತೋಷ್ ಕುಮಾರ್ (29), ಪ್ರವೀಣ್ ಕುಮಾರ್ (23), ಪುಟ್ಟರಾಜು (26), ನಿಖೀಲ್ ಓಲಿವರ್ (27) ಹಾಗೂ ಹಲಸೂರಿನ ಕಾರ್ತಿಕ್ (28) ಬಂಧಿತರು. ಆರೋಪಿಗಳಿಂದ ಒಂದು ಕಾರು, ನಕಲಿ ಗುರುತಿನ ಚೀಟಿಗಳು ಹಾಗೂ ವಿಸಿಟಿಂಗ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ.
Related Articles
Advertisement
ಬೀಗ ಜಡಿದ ಆರೋಪಿಗಳು: ಗುಡಿ ಕೈಗಾರಿಕೆ ಮಾಲೀಕ ಷಹಬಾಜ್ ಹಣ ನೀಡಲು ನಿರಾಕರಿಸಿದ್ದರಿಂದ ಗುಡಿ ಕೈಗಾರಿಕೆಗೆ ಆರೋಪಿಗಳು ಬೀಗ ಜಡಿದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಆರೋಪಿಗಳು ಕಾಲ್ಕಿತ್ತಿದ್ದಾರೆ. ನಂತರ ಬೆನ್ನತ್ತಿದ್ದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖಾಧಿಕಾರಿಗಳಿಗೆ ಹೆದರುತ್ತಾರೆ ಎಂಬುದನ್ನೇ ಬಂಡವಾಳ ಮಾಡಿಕೊಂಡು ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಜನೀ ಪ್ಯಾನ್..: ಬಂದಿತರ ಪೈಕಿ ಸಂತೋಷ್ ಕುಮಾರ್ ಅಖೀಲ ಕರ್ನಾಟಕ ಸೂಪರ್ ಸ್ಟಾರ್ ರಜನಿಕಾಂತ್ ಪ್ಯಾನ್ಸ್ ಅಸೋಸಿಯೇಷನ್ ಮುಖಂಡನಾಗಿದ್ದ. ಇತ್ತೀಚೆಗೆ ರಜನೀಕಾಂತ್ ರಾಜಕೀಯ ಪ್ರವೇಶದ ಕುರಿತು ಬಹಿರಂಗ ಸಭೆ ನಡೆಸಿದ ಸಂದರ್ಭದಲ್ಲಿಯೂ ಚೆನ್ನೈಗೆ ತೆರಳಿ ಶುಭಾಶಯ ಕೋರಿದ್ದ. ಬೆಂಗಳೂರಿಗೆ ನಟ ರಜನಿಕಾಂತ್ ಆಗಮಿಸಿದಾಗ ಇಲ್ಲಿನ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.