Advertisement

12ರ ಬಾಲಕಿಯ ಅಪಹರಣ, ಕೊಲೆ: ಆರು ಮಂದಿ ಸೆರೆ, ಜೈಲಿಗೆ

05:06 PM Apr 30, 2018 | Team Udayavani |

ಮುಜಫ‌ರನಗ, ಬಿಹಾರ : ಹನ್ನೆರಡು ವರ್ಷ ಪ್ರಾಯದ ಹುಡುಗಿಯೊಬ್ಬಳ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಇಂದು ಸೋಮವಾರ ಆರು ಮಂದಿಯನ್ನು ಬಂಧಿಸಿದ್ದು ನ್ಯಾಯಾಲಯ ಅವರನ್ನು ಜೈಲಿಗೆ ಕಳುಹಿಸಿದೆ.

Advertisement

ಬಂಧಿತ ಆರೋಪಿಗಳೆಂದರೆ ಶಾ ಆಲಂ ಶಬ್ಬು, ವಿಕ್ರಾಂತ್‌ ಶುಕ್ಲಾ, ಬೃಜೇಶ್‌ ಸಿಂಗ್‌,ರಾಜೇಶ್‌ ಕುಮಾರ್‌, ವಿಮಲ್‌ ಅಗ್ರವಾಲ್‌, ಅಭಯ್‌ ಗುಪ್ತಾ. 

ಕಳೆದ ಶನಿವಾರ ರಾತ್ರಿ ಈ ಆರೋಪಿಗಳನ್ನು ಸಿಬಿಐ ಪಟ್ನಾದಲ್ಲಿನ ತನ್ನ ಪ್ರಧಾನ ಕಾರ್ಯಾಲಯಕ್ಕೆ ಪ್ರಶ್ನಿಸುವುದಕ್ಕಾಗಿ ಕರೆಸಿಕೊಂಡಿತ್ತು. ಅಂತೆಯೇ ಅವರನ್ನು ಅಲ್ಲಿ ಬಂಧಿಸಿತು ಎಂದು ಸಿಬಿಐ ವಕೀಲ ಎಚ್‌ ಎ ಖಾನ್‌ ತಿಳಿಸಿದ್ದಾರೆ. 

ಆರೋಪಿಗಳನ್ನು ನಿನ್ನೆ ಭಾನುವಾರ ವಿಶೇಷ ಸಿಬಿಐ ನ್ಯಾಯಾಧೀಶ ಅಮಿತ್‌ ಕುಮಾರ್‌ ದೀಕ್ಷಿತ್‌ ಅವರೆದುರು ಅವರ ನಿವಾಸದಲ್ಲಿ ಹಾಜರುಪಡಿಸಿದಾಗ ನ್ಯಾಯಾಧೀಶರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next