Advertisement

ಚೇತೇಶ್ವರ ಪೂಜಾರ, ಹನುಮ ವಿಹಾರಿ ಮತ್ತು ರವಿಶಾಸ್ತ್ರೀಗೆ ಆರು ದಿನ ಕ್ವಾರಂಟೈನ್‌?

03:20 PM Oct 06, 2020 | keerthan |

ಹೊಸದಿಲ್ಲಿ: ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ ಪೂಜಾರ, ಹನುಮ ವಿಹಾರಿ ಮತ್ತು ಮುಖ್ಯ ಕೋಚ್‌ ರವಿಶಾಸ್ತ್ರೀ ಸಹಿತ ಕೋಚಿಂಗ್‌ ಸಿಬಂದಿಗೆ ಐಪಿಎಲ್‌ ಮುಗಿದ ಬಳಿಕ ಆಸ್ಟ್ರೇಲಿಯಕ್ಕೆ ತೆರಳುವ ಮೊದಲು ದುಬಾೖಯಲ್ಲಿ ಆರು ದಿನಗಳ ಕ್ವಾರಂಟೈನ್‌ ವಿಧಿಸುವ ಸಾಧ್ಯತೆಯಿದೆ.

Advertisement

ಐಪಿಎಲ್‌ ಕೂಟ ಮುಗಿದ ತತ್‌ಕ್ಷಣ ಭಾರತೀಯ ತಂಡವು ಆಸ್ಟ್ರೇಲಿಯಕ್ಕೆ ತೆರಳಲಿದೆ. ಸದ್ಯ ಐಪಿಎಲ್‌ನಲ್ಲಿ ಆಡುತ್ತಿರುವ 23ರಿಂದ 25 ಮಂದಿ ಆಸ್ಟ್ರೇಲಿಯಕ್ಕೆ ತೆರಳಲಿದ್ದಾರೆ. ಯುಎಇಯಿಂದ ಆಸ್ಟ್ರೇಲಿಯಕ್ಕೆ ತಂಡವನ್ನು ಕೊಂಡೊಯ್ಯಲು ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಿಯಮ ಸಡಿಲಗೊಳ್ಳದಿದ್ದರೆ ಆಸ್ಟ್ರೇಲಿಯದಲ್ಲಿ ಆಟಗಾರರು ಎರಡು ವಾರ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

ಇದನ್ನೂ ಓದಿ:ಐಪಿಎಲ್ ನಿಂದ ಅಮಿತ್‌ ಮಿಶ್ರಾ ಮತ್ತು ವೇಗಿ ಭುವನೇಶ್ವರ್‌ ಕುಮಾರ್‌ ಔಟ್!

ಸದ್ಯದ ಮಟ್ಟಿಗೆ ಎಲ್ಲ ಆಟಗಾರರು ದುಬಾೖಯಿಂದ ಒಂದೇ ವಿಮಾನದಲ್ಲಿ ಆಸ್ಟ್ರೇಲಿಯಕ್ಕೆ ತೆರಳುವ ನಿಟ್ಟಿನಲ್ಲಿ ಯೋಜನೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಟೆಸ್ಟ್‌ ಆಟಗಾರರಾದ ಪೂಜಾರ, ಹನುಮ ವಿಹಾರಿ, ಕೋಚಿಂಗ್‌ ಸಿಬಂದಿ ಈ ತಿಂಗಳಾಂತ್ಯದಲ್ಲಿ ದುಬಾೖಗೆ ತೆರಳುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next