Advertisement

Ladakh; ಪೂರ್ವ ಲಡಾಕ್‌ನಲ್ಲಿ ಪರಿಸ್ಥಿತಿ ಸಾಮಾನ್ಯಕ್ಕೆ ಮರಳಿಲ್ಲ: ಸೇನೆ

10:12 PM Oct 01, 2024 | Team Udayavani |

ನವದೆಹಲಿ: ಚೀನಾ ಗಡಿ ಪೂರ್ವ ಲಡಾಕ್‌ನಲ್ಲಿ ಪರಿಸ್ಥಿತಿಯು ಸ್ಥಿರವಾಗಿದೆಯೇ  ಹೊರತು ಸಾಮಾನ್ಯವಾಗಿಲ್ಲ. ಈಗಲೂ ಅದು ಸೂಕ್ಷ್ಮತೆಯಿಂದ ಕೂಡಿದೆ ಎಂದು ಭೂಸೇನಾ ಮುಖ್ಯಸ್ಥ ಜ. ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

Advertisement

ಚಾಣಕ್ಯ ಡಿಫೆನ್ಸ್‌ ಡಾಯಲಾಗ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಕಡೆಯಿಂದ ಸಕಾರಾತ್ಮಕ ಸಂಕೇತಗಳು ದೊರೆಯುತ್ತಿವೆ. ನಾವು ತಿಳಿದುಕೊಳ್ಳಬೇಕಾಗಿದ್ದು ಏನೆಂದರೆ, ರಾಜತಾಂತ್ರಿಕ ನಡೆಯು ನಮಗೆ ಆಯ್ಕೆಗಳನ್ನು ಮತ್ತು ಸಾಧ್ಯತೆಗಳನ್ನು ಒದಗಿಸುತ್ತದೆ. ಆದರೆ, ತಳಮಟ್ಟದಲ್ಲಿ ಜಾರಿಯ ವಿಷಯ ಬಂದಾಗ ಅದು ಎರಡೂ ಕಡೆಯ ಸೇನಾ ಕಮಾಂಡರ್‌ಗಳನ್ನು ಅವಲಂಬಿಸಿರುತ್ತದೆ ಎಂದರು.

ಪೂರ್ವ ಲಡಾಕ್‌ನಲ್ಲಿ ಈಗಲೂ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿಲ್ಲ. 2020ಕ್ಕಿಂತ ಮುಂಚೆ ಇದ್ದ ಸ್ಥಿತಿಯನ್ನು ಸ್ಥಾಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.  ಇದೇ ವೇಳೆ, ಹೆಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಪೇಜರ್‌ ಸ್ಫೋಟಿಸಿದ ಇಸ್ರೇಲ್‌ ಸಾಹಸಕ್ಕೆ ಭೂಸೇನಾ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next