Advertisement

ವಿಕಲಚೇತನರಿಗೆ ನಿವೇಶನ ಹಕ್ಕು ಪತ್ರ

12:27 PM Feb 19, 2018 | Team Udayavani |

ಕೆಂಗೇರಿ: ಕ್ಷೇತ್ರದ ವ್ಯಾಪ್ತಿಯ ನಿವೇಶನ ರಹಿತ ವಿಕಲಚೇತನರ ಕುಟುಂಬಗಳಿಗೆ ನಿವೇಶನ ನೀಡಲು ರಾಜ್ಯ ಸರ್ಕಾರ 5 ಎಕರೆ ಜಾಗವನ್ನ ಮೀಸಲಿರಿಸಿದ್ದು, ಶೀಘ್ರವೇ ಅರ್ಹ ಫ‌ಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರ ವಿತರಿಸುವುದಾಗಿ ಶಾಸಕ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

Advertisement

ಹೆಮ್ಮಿಗೇಪುರ ವಾರ್ಡ್‌ನ ಮೈಲಸಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲಿಕೆಯಿಂದ ಮಂಜೂರಾದ ತ್ರಿಚಕ್ರ ವಾಹನವನ್ನು ವಿಕಲಚೇತನರಿಗೆ ನೀಡಿ ಮಾತನಾಡಿ, ವಿಕಲಚೇತನರು, ಅಸಹಾಯಕರು ಹಾಗೂ ದಮನಿತರ ಕಲ್ಯಾಣ, ಜೀವನ ಮಟ್ಟ ಸುಧಾರಣೆಗೆ ಆದ್ಯತೆ ನೀಡುವುದು ನಮ್ಮೆ ಕರ್ತವ್ಯವಾಗಬೇಕಾಗಿದೆ ಎಂದರು.

ಪಾಲಿಕೆ ಸದಸ್ಯ ಆರ್ಯ ಶ್ರೀನಿವಾಸ್‌ ಮಾತನಾಡಿದರು. ಬಿಬಿಎಂಪಿ ನಾಮ ನಿರ್ದೇಶಿತ ಮಾಜಿ ಸದಸ್ಯ ಮೈಲಸಂದ್ರ ಮುನಿರಾಜು, ಹೆಮ್ಮಿಗೆಪುರ ಕಾಂಗ್ರೆಸ್‌ ಅಧ್ಯಕ್ಷ ಮೈಲಸಂದ್ರ ನಾಗರಾಜು, ಬಿಎಚ್‌ಇಎಲ್‌ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ವೆಂಕಟೇಶ್‌ ಮುಖಂಡರಾದ ಕಿರಣ್‌ ಕುಮಾರ್‌, ಕುಮಾರಸ್ವಾಮಿ, ನಾಗೇಶ್‌, ಮಂಜುನಾಥ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next