Advertisement

Puttur ಅತ್ಯಾಚಾರ ಆರೋಪ; ಮಾನವ ಹಕ್ಕುಗಳ ಆಯೋಗಕ್ಕೂ ದೂರು

12:05 AM Sep 09, 2024 | Team Udayavani |

ಪುತ್ತೂರು: ಅತ್ಯಾಚಾರ ಆರೋಪ ಹೊರಿಸಿ ಅರುಣ್‌ ಕುಮಾರ್‌ ಪುತ್ತಿಲ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಸಂತ್ರಸ್ತೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದು, ಪುತ್ತೂರು ನಗರ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬಂದಿ ಆರಂಭದಲ್ಲಿ ತನ್ನ ದೂರನ್ನು ಸ್ವೀಕರಿಸಿಲ್ಲ, ಪೊಲೀಸ್‌ ಸಿಬಂದಿಗಳೂ ಆರೋಪಿಯೊಂದಿಗೆ ಶಾಮೀಲಾಗಿ ತನಗೆ ನ್ಯಾಯ ಕೊಡಿಸಲು ವಿಫಲರಾಗಿದ್ದಾರೆ ಎಂದೂ ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

Advertisement

ನನಗಾದ ಅನ್ಯಾಯದ ವಿರುದ್ಧ ದೂರು ನೀಡಲು ಆ. 30ರಂದು ಪುತ್ತೂರು ನಗರ ಪೊಲೀಸ್‌ ಠಾಣೆಗೆ ಹೋದಾಗ ಅಲ್ಲಿನ ಅಧಿಕಾರಿ ಮತ್ತು ಸಿಬಂದಿ ನನ್ನ ದೂರನ್ನು ಸ್ವೀಕರಿಸದೆ ನನ್ನನ್ನು ಮೂರು ದಿನಗಳ ಕಾಲ ಕಾಯಿಸಿದ್ದರು ಎಂದಿದ್ದಾರೆ.
ಆರೋಪಿ ಮತ್ತು ಆತನ ಕಡೆಯವರು ದೂರನ್ನು ನೀಡದಂತೆ ಮತ್ತು ಪ್ರಕರಣದಲ್ಲಿ ಸಾಕ್ಷಿ ನುಡಿಯದಂತೆ ನನಗೆ ಜೀವಬೆದರಿಕೆ ಹಾಕುತ್ತಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next