Advertisement

Heavy Rain: ಭಾರಿ ಮಳೆಗೆ ರಸ್ತೆ ಮೇಲೆ ಹರಿದ ಸೀತಾನದಿ; ವಾಹನ ಸಂಚಾರ ಬಂದ್

11:25 AM Jul 16, 2024 | Team Udayavani |

ಹೆಬ್ರಿ,: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಆಗುಂಬೆ ಹೆಬ್ರಿ ಸಂಪರ್ಕಿಸುವ ಸೀತಾನದಿ ಬಳಿ ನದಿ ಉಕ್ಕಿ ರಸ್ತೆಯ ಮೇಲೆ ಹರಿದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

Advertisement

ಸೋಮವಾರ ರಾತ್ರಿ ನೀರು ಮೇಲೆರುತ್ತಿದ್ದಂತೆ ವಾಹನ ಸಂಚಾರ ಕಡಿಮೆಯಾಗುತ್ತಾ ಬಂದಿದ್ದು ನಂತರ ರಾತ್ರಿ  ವಾಹನ ಸಂಚಾರ ಸಂಪೂರ್ಣ ನಿಷೇಧ ಮಾಡಲಾಗಿದೆ.  ರಸ್ತೆಯ  ಮೇಲ್ಭಾಗಕ್ಕೆ ಹರಿಯುತ್ತಿರುವ ನೀರು ಪಕ್ಕದ ಅಂಗಡಿ ಹೋಟೆಲ್ ಗಳ ಬಳಿ ತನಕ ಹರಿದು ಹಾಗೂ ಸುತ್ತಮುತ್ತಲಿನ ಪರಿಸರದ ತೋಟಗಳು ಜಲಾವೃತಗೊಂಡಿದೆ.

ಸೀತಾನದಿ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧ :

ಮಂಗಳಾರ ಬೆಳಿಗ್ಗೆಯಿಂದಲೂ ಕೂಡ ಬಾರಿ ಮಳೆ ಆಗುತ್ತಿದ್ದು ಸೀತಾನದಿ ನೀರಿನ ಮಟ್ಟ ಏರುತ್ತಿದ್ದು   ಹೆಬ್ರಿ ಸೋಮೇಶ್ವರ ಮಾರ್ಗದಲ್ಲಿ  ವಾಹನ ಸಂಚರಿಸದಂತೆ  ಹಾಗೂ ಪರ್ಯಾಯ ಮಾರ್ಗವಾಗಿ ಆಗುಂಬೆಗೆ ಹೋಗುವವರು ಹೆಬ್ರಿಯಿಂದ ಮಾಂಡಿಮೂರ್ಕೈ, ಮಡಾಮಕ್ಕಿ  ಸೋಮೇಶ್ವರ ಮೂಲಕ ತೆರಳುವಂತೆ ಹೆಬ್ರಿ ಪೊಲೀಸ್ ಠಾಣಾಧಿಕಾರಿ  ಮಹೇಶ್ ಟಿ.ಅವರು ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next