Advertisement

ಸಿರಿಗೇರಿಯಲ್ಲಿ ಅತಿಹೆಚ್ಚು ಮಳೆ

04:25 PM Jun 24, 2020 | Naveen |

ಸಿರುಗುಪ್ಪ: ತಾಲೂಕಿನ ವಿವಿಧ ಕಡೆಗಳಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಈಗಾಗಲೇ ಬಿತ್ತನೆ ಮಾಡಿದ ಹತ್ತಿ, ಸೂರ್ಯಕಾಂತಿ, ನವಣೆ ಮತ್ತು ಭತ್ತದ ಸಸಿ ಮಡಿಗಳು ಬೆಳೆಯಲು ಈ ಮಳೆ ಸಹಕಾರಿಯಾಗಿದ್ದು, ತಾಲೂಕಿನ ಕೆಲ ಭಾಗಗಳಲ್ಲಿ ಹತ್ತಿ ಬೀಜ ನಾಟಿ ಮಾಡುವ ಕಾರ್ಯದಲ್ಲಿ ರೈತರು ತೊಡಗಿರುವುದು ಕಂಡುಬಂತು.

Advertisement

ಸಿರಿಗೇರಿಯಲ್ಲಿ 40.1 ಮಿಮೀ ಅತಿಹೆಚ್ಚು, ಕೆ.ಬೆಳಗಲ್‌ನಲ್ಲಿ ಅತಿಕಡಿಮೆ 6.8 ಮಿಮೀ ಮಳೆಯಾಗಿದ್ದು, ತೆಕ್ಕಲಕೋಟೆ 9.2, ಸಿರಿಗೇರಿ 40.1, ಎಂ.ಸೂಗೂರು 14.6, ರಾವಿಹಾಳ್‌ 7.2, ಕರೂರು 32.6, ಕೆ.ಬೆಳಗಲ್‌ 6.8 ಮಿಮೀ ಮಳೆಯಾಗಿದೆ ಎಂದು ತಾಲೂಕು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರ ರಾತ್ರಿ ಸುರಿದ ಮಳೆಯಿಂದ ಈಗಾಗಲೆ ಬಿತ್ತನೆ ಮಾಡಿದ ಬೆಳೆಗಳಿಗೆ ಅನುಕೂಲವಾಗಿದೆ. ಅಲ್ಲದೆ ಕೆಲವು ಕಡೆ ಸೋಮವಾರವು ಬಿತ್ತನೆ ಕಾರ್ಯ ಆರಂಭವಾಗಿದೆ ಎಂದು ಕೃಷಿ ಇಲಾಖೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ನಜೀರ್‌ ಅಹಮ್ಮದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next